Advertisement

France ದಾಳಿಯ ಬಗ್ಗೆ ಖಂಡನೆ ಏಕೆ ಇಲ್ಲ?

12:14 AM Jul 04, 2023 | Team Udayavani |

ಪಶ್ಚಿಮ ಯುರೋಪ್‌ನ ಪ್ರಮುಖ ದೇಶ ಫ್ರಾನ್ಸ್‌ನಲ್ಲಿ ಜೂ.27ರಿಂದ ವಾಹನಗಳಿಗೆ ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವುದು, ಲೂಟಿ ಸೇರಿದಂತೆ ಹಲವು ರೀತಿಯ ಕುಕೃತ್ಯಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗಿಲ್ಲ. ನಮ್ಮ ದೇಶದಲ್ಲಿ ಉಂಟಾಗುವ ಯಾವುದೇ ಸಣ್ಣ ವಿದ್ಯಮಾನಗಳನ್ನು ಅತಿರಂಜಿತವಾಗಿ ವರದಿ ಮಾಡುವ ಕೆಲವೊಂದು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ ಮಾಧ್ಯಮ ಸಂಸ್ಥೆಗಳು, ಮಾನವ ಹಕ್ಕುಗಳ ಸಂಘಟನೆಗಳ ಮೌನ ಹಲವು ಶಂಕೆಗಳನ್ನು ಹುಟ್ಟು ಹಾಕುತ್ತದೆ.

Advertisement

ಫ್ರಾನ್ಸ್‌ನ ಗೃಹ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ ಜೂ.27ರಿಂದ ಇದುವರೆಗೆ 3,354ಕ್ಕಿಂತ ಹೆಚ್ಚು ಗಲಭೆಕೋರರನ್ನು ಹೆಡೆ  ಮುರಿ ಕಟ್ಟಲಾಗಿದೆ. ಸುದ್ದಿಸಂಸ್ಥೆಗಳ ವರದಿಯಂತೆ ರವಿವಾರ ದಿಂದ ಸೋಮವಾರದ ಅವಧಿಯಲ್ಲಿ 297 ವಾಹನಗಳಿಗೆ ಬೆಂಕಿ ಇಡಲಾಗಿದೆ. ಜತೆಗೆ 34 ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ.

ಸದ್ಯ ದಂಗೆಯಿಂದ ಜರ್ಝರಿತವಾಗಿರುವ ದೇಶದ ಒಟ್ಟು ಜನಸಂಖ್ಯೆ 68.04 ಮಿಲಿಯ. ಆ ದೇಶದ ರಾಷ್ಟ್ರೀಯ ಸಾಂಖೀÂಕ ಸಂಸ್ಥೆ 2021ರಲ್ಲಿ ನೀಡಿದ್ದ ವರದಿಯಂತೆ 7 ಮಿಲಿಯ ವಲಸಿಗರು ಅಲ್ಲಿ ಇದ್ದಾರೆ. ಅಂದರೆ ಶೇ.10.3 ಪ್ರಮಾಣದಲ್ಲಿ ಒಟ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದಾರೆ. ಆ ದೇಶದಲ್ಲಿ ಪಿಂಚಣಿ ಕ್ಷೇತ್ರದ ಸುಧಾರಣೆಯನ್ನು ಪ್ರಶ್ನಿಸಿ ಜನವರಿಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಪ್ರತಿಭಟನೆ ನಡೆಸಿದ್ದರು.

ಜೂ.27ರಂದು ಮೊರೊಕ್ಕೋ ಮೂಲದ ನಹಾಲ್‌ ಎಂಬಾತ ಡ್ರೈವಿಂಗ್‌ ಲೈಸನ್ಸ್‌ ಹೊಂದಿದ್ದಾನೆಯೇ ಇಲ್ಲವೋ ಎಂಬುದರ ಬಗ್ಗೆ ತಪಾಸಣೆ ನಡೆಸಲು ಪೊಲೀಸರು ಆತನನ್ನು ತಡೆದಿದ್ದರು. ಆದರೆ ಆತ ಅದನ್ನು ಧಿಕ್ಕರಿಸಿ ಕಾರಿನಲ್ಲಿ ಮುಂದಕ್ಕೆ ಚಲಿಸಿದ್ದ ಎಂಬ ಕಾರಣಕ್ಕಾಗಿ ಪೊಲೀಸರು ಗುಂಡು ಹಾರಿಸಿದ್ದರು. ಇದರಿಂದ ಆತ ಅಸುನೀಗಿದ್ದ ಎಂದು ಆರೋಪಿಸಲಾಗಿತ್ತು. ಆ ಘಟನೆಯಿಂದ ಪ್ರತಿಭಟನೆಗಳು ಸ್ಫೋಟಗೊಂಡಿವೆ. ಅದಕ್ಕಿಂತ ಮೊದಲು ಜನವರಿಯಿಂದಲೇ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ನೇತೃತ್ವದ ಸರಕಾರದ ಹೊಸ ಪಿಂಚಣಿ ನೀತಿಯ ವಿರುದ್ಧವೇ ಭಾರೀ ಪ್ರಮಾಣದಲ್ಲಿ ಆಕ್ರೋಶ ಉಂಟಾಗಿತ್ತು. ಅದರಲ್ಲಿ ನಿವೃತ್ತಿ ವಯೋಮಿತಿಯನ್ನು ಹಾಲಿ 62ರಿಂದ 64 ವರ್ಷಕ್ಕೆ ಪರಿಷ್ಕರಿಸುವುದರ ಬಗ್ಗೆ ಜನರು ಆಕ್ರೋಶಗೊಂಡಿದ್ದರು.

ಫ್ರಾನ್ಸ್‌ನಲ್ಲಿ ಉಂಟಾಗಿರುವ ಘಟನೆಗಳು ಖಂಡನೀಯವೇ ಹೌದು. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸೌಹಾರ್ದಯುತ ವಾತಾವರಣದಲ್ಲಿ ಕುಳಿತು ಉಭಯ ಪಕ್ಷಗಳೂ ಪರಿಹರಿಸಿ ಕೊಳ್ಳಬೇಕು. ಕಾನೂನನ್ನು ಕೈಗೆ ತೆಗೆದುಕೊಂಡು ಸಾರ್ವಜನಿಕ ಆಸ್ತಿ ಹಾಳು ಮಾಡುವ ಕಿಡಿಗೇಡಿತನವನ್ನು ಬಿಡಬೇಕು. ಅಂಥವರ ವಿರುದ್ಧ ಕಠಿನ ಕ್ರಮವನ್ನೂ ಕೈಗೊಳ್ಳಬೇಕು. ಆದರೆ ಈ ಎಲ್ಲ ಅಂಶಗಳ ಬಗ್ಗೆ ಜಗತ್ತಿನ ನಿಷ್ಪಕ್ಷಪಾತ ಮತ್ತು ನಿರ್ಭೀತ ಎಂದು ಹೇಳಿಕೊಳ್ಳುವ ಕೆಲವು ಸಂಘಟನೆಗಳು ಮೌನವನ್ನು ತಾಳಿದ್ದು ಸರಿಯಲ್ಲ. ಆ ದೇಶದಲ್ಲಿ ಉಂಟಾಗಿರುವ ತೆÌàಷಮಯ ವಾತಾವರಣದ ಪರಿಸ್ಥಿತಿಯ ವಿರುದ್ಧ ಅತ್ಯುಗ್ರ ಶಬ್ದಗಳಿಂದ ಖಂಡಿಸುವ ಬಗ್ಗೆ ಇನ್ನಾದರೂ ಮುಕ್ತ ಮನಸ್ಸು ಮಾಡಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next