Advertisement

Oscars: ಆಸ್ಕರ್‌ಗೆಂದೇ ಸಿನೆಮಾ ಏಕೆ ಮಾಡುತ್ತೀರಿ?

11:34 PM Nov 24, 2023 | Team Udayavani |

ಪಣಜಿ: ನಮ್ಮ ಚಲನಚಿತ್ರಗಳಿಗೆ ಆಸ್ಕರ್‌ ಪ್ರಶಸ್ತಿ ಪಡೆಯಲು ಏನು ಮಾಡಬೇಕು? ಎಂಬ ಪ್ರಶ್ನೆಯ ಜತೆಗೇ ಆಸ್ಕರ್‌ಗಾಗಿಯೇ ಏಕೆ ಮಾಡಬೇಕು? ಇವೆರಡೂ ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ. ಅವೆರಡಕ್ಕೂ ಉತ್ತರ ಸಿಕ್ಕಿದ್ದು ಇಫಿ ಚಲನಚಿತ್ರೋತ್ಸವದ ಸಂವಾದದಲ್ಲಿ.

Advertisement

ಸರಳವಾದ ಒಂದು ಸಾಲಿನ ಉತ್ತರ. ಒಳ್ಳೆ ಕಥೆಗಳಿರಬೇಕು. ಎರಡನೇ ಸಾಲಿನ ಉತ್ತರವೇನೆಂದರೆ ಭಾರತದಲ್ಲಿ ಅಂಥ ಬಹಳಷ್ಟು ಕಥೆಗಳಿವೆ. ಇದೇ ಸಂದರ್ಭದಲ್ಲಿ ಆಸ್ಕರ್‌ ಗೆಂದೇ ಸಿನೆಮಾ ಮಾಡುವುದರಲ್ಲಿ ಅರ್ಥವಿಲ್ಲ. ಅದಷ್ಟೇ ನಮ್ಮ ಗುರಿಯಾಗಬಾರದೂ ಸಹ. ಒಂದು ಸರ್ವಶ್ರೇಷ್ಠ ಸಿನೆಮಾ ಮಾಡುವುದು ನಮ್ಮ ಗುರಿಯಾಗಬೇಕು. ಉಳಿದೆಲ್ಲವೂ ಹಿಂಬಾಲಿಸುತ್ತದೆ ಎಂಬುದು ಒಟ್ಟೂ ಅಭಿಪ್ರಾಯವಾಗಿತ್ತು.

“ಸ್ಲಂ ಡಾಗ್‌ ಮಿಲಿನೇರ್‌’ ಚಿತ್ರದ ಸೌಂಡ್‌ ಡಿಸೈನರ್‌ ಮತ್ತು ಪ್ರೊಡಕ್ಷನ್‌ ಮಿಕ್ಸರ್‌ ರಸೂಲ್‌ ಕುಟ್ಟಿ ಅವರ ಪ್ರಕಾರ, ಆಸ್ಕರ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಯಾವುದೇ ಚಲನಚಿತ್ರಗಳು ಆಯಾ ದೇಶದಲ್ಲಿನ ವೈವಿಧ್ಯತೆಯನ್ನು ಬಿಂಬಿಸಬೇಕು. ಪ್ರಮುಖ ಸಿನೆಮಾ ನಿರ್ದೇಶಕ ಋತ್ವಿಕ್‌ ಘಟಕ್‌ ಅವರ ಮಾತನ್ನು ಉಲ್ಲೇಖೀಸುತ್ತಾ, ಹೆಚ್ಚು ಸ್ಥಳೀಯ(ರಾಷ್ಟ್ರೀಯ)ರಾದರೆ ಅಷ್ಟೇ ವಿಶ್ವ ಮಾನವರಾಗಲು ಸಾಧ್ಯ. ಹಾಗಾಗಿ ಹೆಚ್ಚು ಸ್ಥಳೀಯ, ರಾಷ್ಟ್ರೀಯ ನೆಲೆಯ ಒಂದು ಆಲೋಚನೆ ಜಾಗತಿಕ ಆಲೋಚನೆಯಾಗಿ ಬದಲಾಗಬಹುದು. ಇದನ್ನು ನಾವು ಗಮನಿಸಬೇಕು ಎಂದರು.
ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಯೋಗವೂ ಪ್ರಶಸ್ತಿಯ ಬಳಿ ಕೊಂಡೊಯ್ಯಬಲ್ಲದು ಎಂದ ಅವರು, ಸರಕಾರಗಳೂ ಆಸ್ಕರ್‌ ಸ್ಪರ್ಧೆಗೆ ಇಳಿಯುವ ಚಲನಚಿತ್ರಗಳ ತಂಡವನ್ನು ಬೆಂಬಲಿಸಲು ಆರ್ಥಿಕ ಸಹಕಾರ ನೀಡಲು ಪ್ರತ್ಯೇಕ ನಿಧಿಯನ್ನು ಸ್ಥಾಪಿಸಬೇಕು ಎಂದವರು ರಸೂಲ್‌

1982 ರಲ್ಲಿ ಭಾನು ಆಥೈಯ ಈ ಗಾಜಿನ ಮನೆ ಒಡೆದು ಒಳಹೊಕ್ಕಿದ್ದರು. “ಗಾಂಧಿ’ ಚಿತ್ರದ ಕಾಸ್ಟೂಮ್ಸ್‌ ಡಿಸೈನ್‌ಗೆ ಆಸ್ಕರ್‌ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಬಳಿಕ ಎ.ಆರ್‌. ರೆಹಮಾನ್‌, ರಸೂಲ್‌ ಕುಟ್ಟಿ, ಎಂ.ಎಂ. ಕೀರವಾಣಿ, ಗುಣೀತ್‌ ಮೊಂಗ ಕಪೂರ್‌ ಹಾಗೂ ಕಾರ್ತಿಕಿ ಗೊನ್ಸಾಲ್ವೇಸ್‌ ಎಲ್ಲರೂ ಈ ಹಾದಿಯಲ್ಲಿ ಗುರಿ ಮುಟ್ಟಿದ್ಧಾರೆ ಎಂದರು.

ಸಂವಾದವನ್ನು ಆರಂಭಿಸಿದ “ದಿ ಎಲಿಫೆಂಟ್‌ ವಿಸ್ಪರರ್ಸ್‌’ ಚಿತ್ರದ ನಿರ್ಮಾಪಕರಾದ ಗುಣೀತ್‌ ಮೊಂಗ ಕಪೂರ್‌, ಅಮೆರಿಕದಲ್ಲಿ ಹಂಚಿಕೆಯಾಗಿ ಪ್ರದರ್ಶನವಾಗುವುದೂ ಆಸ್ಕರ್‌ ದಾರಿಯ ಆರಂಭವಾಗಬಹುದು. ಹಾಗಾಗಿ ಸಿನೆಮಾ ನಿರ್ಮಿಸಿದ ಮೇಲೆ ಇಡೀ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರಿಯಬೇಕು. ಬಳಿಕ ಹಂಚಿಕೆ, ಕಾರ್ಯತಂತ್ರ ಹಾಗೂ ಸರಿಯಾದ ಪಾಲುದಾರರನ್ನು ಹಿಡಿದರೆ ಗುರಿ ಮುಟ್ಟಲು ಸಾಧ್ಯವಿದೆ ಎಂದರು.

Advertisement

ಹಾಗೆಯೇ ಆಸ್ಕರ್‌ ಹಾದಿಯಲ್ಲಿ ಚಿತ್ರೋತ್ಸವಗಳ ಕೊಡುಗೆಯನ್ನು ಉಲ್ಲೇಖೀಸಲು ಮರೆಯಲಿಲ್ಲ. ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳು ಸರಿಯಾಗಿ ಬಿಂಬಿತವಾದರೆ ಆಸ್ಕರ್‌ ಹಾದಿ ಕಠಿನವೆನಿಸದು. ಆದ ಕಾರಣ ಸೂಕ್ತವಾದ ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ನಮ್ಮ ಚಿತ್ರಗಳು ಪ್ರದರ್ಶನಗೊಳ್ಳಬೇಕು ಎಂದರು.

ಶಾರ್ಟ್ಸ್ ಟಿವಿಯ ಕಾರ್ಟರ್‌ ಪಿಲ್ಚರ್‌ ಅವರ ಸಲಹೆಯಂತೆ, ಭಾರತದ ಕಥೆಗಳನ್ನು ಹೇಳಬೇಕು. ಇಲ್ಲಿ ಸಾಕಷ್ಟು ಕಥೆಗಳಿವೆ. ಅವುಗಳನ್ನು ಸರಿಯಾಗಿ ಬಿಂಬಿಸಬೇಕು. ಅದೇ ಆಸ್ಕರ್‌ಗೆ ದಾರಿ ಎಂದರು. ಸೋನಲ್‌ ಕರ್ಲಾ ಸಂವಾದ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next