Advertisement

Mumbai; ಏಕೆ ಹೀಗೆ ಮಾಡಿದೆ?: ಮಾಜಿ ಪ್ರಿಯತಮೆಯ ಹೊಡೆದು ಕೊಂದ!

11:48 PM Jun 18, 2024 | Team Udayavani |

ಮುಂಬಯಿ: ವಾಣಿಜ್ಯ ನಗರಿ ಮುಂಬಯಿಯಲ್ಲಿ ಹಾಡು ಹಗಲೇ ಪ್ರಿಯಕರನೊಬ್ಬ ತನ್ನ ಮಾಜಿ ಪ್ರೇಯಸಿ ಯನ್ನು ಸ್ಪ್ಯಾನ ರ್‌ನಿಂದ 15 ಬಾರಿ ಹೊಡೆದು ಭೀಕರವಾಗಿ ಕೊಂದಿ ದ್ದಾನೆ. ವಸೈ ಪ್ರದೇಶದಲ್ಲಿ ಘಟನೆ ನಡೆದಿದ್ದು, ರಾಹುಲ್‌ ಯಾದವ್‌ ಎಂಬಾತ ತನ್ನ ಮಾಜಿ ಪ್ರೇಯಸಿ ಆರತಿ ಯಾದವ್‌ ಬೇರೆ ಯವರ ಜತೆ ಸಂಬಂಧ ಬೆಳೆಸಿದ್ದಾಳೆಂದು ಈ ಕೃತ್ಯವೆಸಗಿದ್ದಾನೆ.

Advertisement

ಏನಾಯಿತು?: ವಸೈನ ಚಿಂಚಪಾಡ ಪ್ರದೇಶದಲ್ಲಿ ಬೆಳಗ್ಗೆ 8:30 ಗಂಟೆಗೆ ಆರತಿ ಕೆಲಸಕ್ಕೆ ಹೋಗುತ್ತಿದ್ದಳು. ಹಿಂದಿ ನಿಂದ ಬಂದ ರೋಹಿತ್‌ ಸ್ಪ್ಯಾನರ್‌ನಿಂದ ನೇರ ಆಕೆಯ ತಲೆ, ಎದೆಗೆ ಹೊಡೆದಿದ್ದಾನೆ. ಕೂಡಲೇ ಆರತಿ ಕೆಳಗೆ ಬಿದ್ದಿದ್ದು, ರೋಹಿತ್‌ ಬರೊಬ್ಬರಿ 15 ಬಾರಿ ಆಕೆಯ ತಲೆಗೆ ನಿರಂತ ರವಾಗಿ ಹೊಡೆದ ಪರಿಣಾಮ, ಸ್ಥಳದಲ್ಲೇ ಆರತಿ ಮೃತಪಟ್ಟಿದ್ದಾಳೆ. ಅವಳ ಶವದ ಮುಂದೆಯೇ “ಏಕೆ ಹೀಗೆ ಮಾಡಿದೆ?’ ಎಂದು ರೋಹಿತ್‌ ಕಿರುಚಾಡಿದ್ದಾನೆ.

6 ವರ್ಷ ಕಾಲ ಪ್ರೀತಿಸಿದ ಅನಂತರ ತನ್ನನ್ನು ಬಿಟ್ಟು ಆರತಿ ಬೇರೆಯ ವರೊಂದಿಗೆ ಸಂಬಂಧ ಹೊಂದಿದಕ್ಕೆ ರೋಹಿತ್‌ ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ರೋಹಿತ್‌ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next