Advertisement

ಕಾರ್ಡ್‌ ಇಲ್ಲದವರಿಗೂ ಪಡಿತರ ವಿಸ್ತರಣೆ

08:22 AM May 27, 2020 | Hari Prasad |

ಬೆಂಗಳೂರು: ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಮೇ ತಿಂಗಳ ಕೋಟಾದಡಿ ತಲಾ ಹತ್ತು ಕೆಜಿ ಅಕ್ಕಿ ಮೇ 31ರ ವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗಲಿದೆ.

Advertisement

ಬಿಪಿಎಲ್‌ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಿ ಇನ್ನೂ ಕಾರ್ಡ್‌ ಪಡೆಯದವರು ಸ್ವೀಕೃತಿ ಪತ್ರ ಮತ್ತು ಆಧಾರ್‌ ತೋರಿಸಿ ಅಕ್ಕಿ ಪಡೆಯಬಹುದಾಗಿದೆ.

ಕೇಂದ್ರ ಯೋಜನೆಯಡಿ ವಲಸೆ ಕಾರ್ಮಿಕರೂ ಆಧಾರ್‌ ತೋರಿಸಿ ಪಡಿತರ ಪಡೆಯಬಹುದು. ಅವರಿಗೂ ಒಂದು ಕುಟುಂಬಕ್ಕೆ ತಲಾ ಐದು ಕೆಜಿ ಅಕ್ಕಿ, ಎರಡು ಕೆಜಿ ಕಡಲೆಬೇಳೆ ವಿತರಿಸಲಾಗುವುದು.

ಈ ಯೋಜನೆಯಡಿ ರಾಜ್ಯಕ್ಕೆ ಬರಬೇಕಾದ ಅಕ್ಕಿ ದಾಸ್ತಾನು ಬಂದಿದೆ. ಬುಧವಾರ ಕಡಲೆಕಾಳು ಬರಲಿದೆ ಎಂದು ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next