Advertisement

ಈ ಚಿತ್ರದ ನಿರ್ದೇಶಕರು ಯಾರು ಗೊತ್ತಾ?

12:55 PM Dec 13, 2017 | Team Udayavani |

ಕನ್ನಡದಲ್ಲಿ “ಸಂಜೀವ’ ಎಂಬ ಚಿತ್ರವೊಂದರ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಚೇತನ್‌ ಗಂಧರ್ವ ಅಭಿನಯದ ಈ ಚಿತ್ರದ ವಿಶೇಷತೆಯೇನು ಗೊತ್ತಾ? ಈ ಚಿತ್ರಕ್ಕೆ ನಿರ್ದೇಶಕರೇ ಇಲ್ಲದಿರುವುದು. ಆಶ್ಚರ್ಯವಾದರೂ ನಿಜ. ಈ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಎಂದು ಟೈಟಲ್‌ ಕಾರ್ಡ್‌ ನೋಡಿದರೆ, ಅಲ್ಲಿ ಯಾರೊಬ್ಬರ ಹೆಸರು ಕಾಣುವುದಿಲ್ಲ.

Advertisement

ಅದರ ಬದಲು ಪಂಚಮಿ ಸಿನಿ ಕ್ರಿಯೇಷನ್ಸ್‌ ಎಂಬ ಹೆಸರು ಕಾಣುತ್ತದೆ. ಅದಕ್ಕೆ ಕಾರಣವೇನೆಂದರೆ, ಈ ಚಿತ್ರವನ್ನು ಒಬ್ಬರು ನಿರ್ದೇಶಿಸಲ್ಲ, ಬದಲಿಗೆ ಮೂವರು ನಿರ್ದೇಶಿಸಿದ್ದಾರೆ. ಉಪೇಂದ್ರ, ಪ್ರೇಮ್‌ ಮತ್ತು ನಾಗಾಭರಣ ಅವರೊಂದಿಗೆ ಕೆಲಸ ಮಾಡಿರುವ ಹುಡುಗರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದೇ ಕಾರಣಕ್ಕೆ ಯಾರೊಬ್ಬರ ಹೆಸರನ್ನೂ ಹಾಕದೆ, ನಿರ್ಮಾಣ ಸಂಸ್ಥೆಯ ಹೆಸರನ್ನೇ ಹಾಕಲಾಗಿದೆ. ಈ ಚಿತ್ರವನ್ನು ರಮೇಶ್‌ ಎಂಬುವವರು ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ಚೇತನ್‌ ಚಂದ್ರ ಮತ್ತು ಲೇಖ ಚಂದ್ರ ನಾಯಕ-ನಾಯಕಿಯಾಗಿ ನಟಿಸುತ್ತಿದ್ದರೂಮ ಅತಿಥಿ ಪಾತ್ರಗಳಲ್ಲಿ ಶ್ರೀನಗರ ಕಿಟ್ಟಿ, ಯೋಗಿ ಮತ್ತು ಶುಭ ಪೂಂಜ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಧು ಕೋಕಿಲ, ಚಿಕ್ಕಣ್ಣ, ದೇವರಾಜ್‌, ಅಚ್ಯುತ್‌ ಕುಮಾರ್‌ ಮುಂತಾದವರು ನಟಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತ ಸಂಯೋಜಿಸಿರುವುದು.

Advertisement

Udayavani is now on Telegram. Click here to join our channel and stay updated with the latest news.

Next