Advertisement
ಅಂತರಾಳದಲ್ಲೆಲ್ಲೋ ಕೊರಗು ಬೇರೂರಿತ್ತು. ಮೋಹದ ಬಲೆಯು ಬಿಚ್ಚಿತ್ತು. ಆಸೆಗಳು ಕೈಕೊಟ್ಟಿತ್ತು. ಪ್ರೀತಿಸಿದ ಹೃದಯ ಪ್ರೀತಿಯಲ್ಲಿ ಸೋತಿತ್ತು. ಆಗಿನ ಹಳೇ ನೆನಪುಗಳಿವು. ಖುಷಿಯೂ ಇದೆ, ದುಃಖವೂ ಇದೆ. ಕಾಲ ಕಳೆದೇ ಹೋಯ್ತು. ನೆನಪುಗಳು ಮಾತ್ರ ಕಳೆದಿಲ್ಲ ನೋಡಿ. ಅಚ್ಚಳಿಯದೇ ಉಳಿದಿವೆ. ಕಣ್ಣುಗಳನ್ನು ಮಿಟುಕಿಸಿ, ಆ ತುಟಿಗಳಿಂದ ನುಡಿದ ಮಾತುಗಳು ಇನ್ನೂ ಕಿವಿಯಲ್ಲಿ ಗುನುಗುತ್ತಿದೆ- ನೀನಿತ್ತ ಭರವಸೆಯ ಆಸೆ ಸೋತು ಸುಮ್ಮನಾಗಿ ಮೂಲೆಸೇರಿದೆ? ನನ್ನ ಪ್ರೀತಿಯಲ್ಲಿ ಏನು ಕೊರತೆ ಇತ್ತು? ಬಿಟ್ಟು ಹೋದವನಿಗೇ ಗೊತ್ತು. ಬಹುಶಃ ಆಕೆಯ ಪ್ರೀತಿ ನನ್ನ ಪ್ರೀತಿಯಲ್ಲಿದ್ದ ಕೊರತೆಯನ್ನು ನೀಗಿಸುವಂತಿತ್ತೋ ಏನೋ? ನನಗೇನು ಬೇಜಾರಿಲ್ಲ. ಆದರೆ, ಪ್ರೀತಿಯ ಹೆಸರಿನಲ್ಲಿ ನೋವನ್ನು ಕಲಿಸಿಕೊಡುತ್ತಾನೆ ಎಂದು ಎಣಿಸಿರಲಿಲ್ಲ. ಆದರೆ, ಜೀವನಕ್ಕೆ ಇದು ಒಂದೊಳ್ಳೆ ಪಾಠ! ಅದೇನೇ ಇರಲಿ, ನನ್ನ ಪ್ರೀತಿಯ ಭಾವನೆಗೆ ಬೆಲೆ ಇದ್ದಂತೆ, ಅವರವರ ಭಾವನೆಗಳಿಗೂ ಬೆಲೆ ಇದೆ.
Related Articles
Advertisement
ಆದರೆ, ನನ್ನ ಜೀವನದಲ್ಲಿ ನನಗೆ ಪ್ರೀತಿಯ ಕೊರತೆಯಾಗಲಿಲ್ಲ. ಒಂದು ದುಂಬಿ ಹಾರಿಹೋದರೂ ನನಗೂ ಮತ್ತೂಂದು ಪ್ರೀತಿಯ ದುಂಬಿ ಸಿಕ್ಕಿದೆ. ಹೊಸ ವಸಂತ ಹೊಸ ರಾಗ ಹಾಡಿದೆ. ಮತ್ತೆ ಹೊಸತನದ ಹೊಸ ನೆನಪುಗಳು ಮೂಡಿ ಈಗ ವಿರಹದ ವೇದನೆ ನನ್ನ ಬಿಟ್ಟು ದೂರ ಸರಿದಿದೆ. ವಿರಹ ನನ್ನ ಮನದಲ್ಲಿ ತನ್ನದೇ ಆದ ಜಾಗದೊಂದಿಗೆ ಗೂಡು ಕಟ್ಟಿಕೊಂಡಿತ್ತು. ನಾನೀಗ ಅದರ ಪುಟ್ಟ ಗೂಡೊಂದನ್ನು ಕಿತ್ತೆಸೆದಿದ್ದೇನೆ. ನನ್ನ ಖುಷಿಗೆ ವಿರಹವೂ ವಿರಹವನ್ನನುಭವಿಸುತ್ತಿದೆ. ಹೃದಯಕ್ಕೆ ಹಾಕಿಕೊಂಡ ಕದವನ್ನು ತೆರೆದವನು ಇವನು. ಯಾರ ಹೃದಯ ಯಾರಿಗೋ, ಯಾರು ಹೇಳಬಲ್ಲರು? ಯಾರ ಪಯಣ ಎಲ್ಲಿಗೋ? ಶೃತಿ ಹೆಗಡೆ
ಪ್ರಥಮ ಎಂ.ಸಿ.ಜೆ. ಎಸ್. ಡಿ. ಎಂ ಕಾಲೇಜು, ಉಜಿರೆ