Advertisement

ಕುಟುಂಬ ಕಲಹಕ್ಕೆ ನೊಂದ ದಂಪತಿ ಆತ್ಮಹತ್ಯೆ: 2 ವರ್ಷದ ಮಗು ಅನಾಥ

12:09 PM Mar 14, 2017 | Team Udayavani |

ಮಹದೇವಪುರ: ಮನೆ ಬಾಡಿಗೆ ಪಾವತಿಸುವ ವಿಚಾರದಲ್ಲಿ ದಂಪತಿಯ ನಡುವೆ ಮನಸ್ಥಾಪ ಉಂಟಾಗಿ ಇಬ್ಬರೂ ಆತ್ಮಹತ್ಯಗೆ ಶರಣಾಗಿರುವ ದಾರುಣ ಘಟನೆ ಕಾಡುಗುಡಿ ಠಾಣೆ ವ್ಯಾಪ್ತಿಯ ಬೆಳತೂರಿನಲ್ಲಿ ಭಾನುವಾರ ನಡೆದಿದೆ. ದಂಪತಿ ಆತ್ಮಹತ್ಯೆಯಿಂದಾಗಿ ಅವರಿಬ್ಬರ ಎರಡು ವರ್ಷದ ಮಗು ಈಗ ತಬ್ಬಲಿಯಾಗಿದೆ. 

Advertisement

ಮಂಜುನಾಥ್‌ ರೆಡ್ಡಿ(27), ನಾಗವೇಣಿ(23) ಆತ್ಮಹತ್ಯೆಗೆ ಶರಣಾದ ದಂಪತಿ. ಚಿಕ್ಕಬಳ್ಳಾಪುರ ಮೂಲದ ದಂಪತಿ, ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು ಕಾಡುಗುಡಿಯ ಬೆಳತೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮಂಜುನಾಥ್‌ ರೆಡ್ಡಿ ಎಲೆಕ್ಟ್ರಿಶಿಯನ್‌ ಆಗಿದ್ದ. ಆತನ ಪತ್ನಿ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಮಂಜುನಾಥ್‌ ರೆಡ್ಡಿ ದುಡಿಮೆಯನ್ನೆಲ್ಲ ಕುಡಿತಕ್ಕೆ ಬಳಸುತ್ತಿದ್ದ. ಇದೆ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಆಗಾಗ ಜಗಳವೂ ಆಗುತ್ತಿತ್ತು. 10ನೇ ತಾರೀಖು ನೀಡಬೇಕಿದ್ದ ಮನೆ ಬಾಡಿಗೆ ವಿಚಾರದಲ್ಲಿ ಭಾನುವಾರ ದಂಪತಿ ನಡುವೆ ಜಗಳವಾಗಿದೆ. ಪತ್ನಿಯೊಂದಿಗೆ ಜಗಳವಾಡಿದ ಮಜುನಾಥ್‌ ನಂತರ ಮನೆಯಿಂದ ಹೊರಗಡೆ ತೆರಳಿದ್ದ.

ಈ ವೇಳೆ ನಾಗವೇಣಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಗೆ ಬಂದ ಮಂಜುನಾಥ್‌ ಪತ್ನಿ ಸಾವಿಗೀಡಾಗಿರುವುದನ್ನು ಕಂಡು ತಾನೂ ನೇಣಿಗೆ ಶರಣಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಹತ್ತಿರದಲ್ಲೀ ಇದ್ದ  ನಾಗವೇಣಿ ಸಹೋದರಿ, ರೆಡ್ಡಿ ಮನೆಯವರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿಯ 2ವರ್ಷದ ಹೆಣ್ಣು ಮಗು ಅನಾಥವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next