Advertisement

ಚರ್ಚ್‌ಗೆ ಹೋಗಿದ್ದಾಗ ಮನೆಯಿಂದ ಚಿನ್ನ, ಹಣ ಕಳವು

07:43 PM Apr 08, 2023 | Team Udayavani |

ಮಂಗಳೂರು: ಮನೆಯವರು ಚರ್ಚ್‌ಗೆ ಹೋದ ವೇಳೆ ಮನೆಯಲ್ಲಿದ್ದ ನಗದು ಹಣ ಮತ್ತು ಚಿನ್ನಾಭರಣ ಕಳವು ಮಾಡಿರುವ ಘಟನೆ ಕುಡುಪು ಪೆದಮಲೆಯಲ್ಲಿ ಸಂಭವಿಸಿದೆ.

Advertisement

ಪ್ರವೀಣ್‌ ಮೊಂತೆರೋ ಅವರು ಗುಡ್‌ಫ್ರೈಡೆ ಪ್ರಯುಕ್ತ ಎ.7ರಂದು ಸಂಜೆ 5.45ಕ್ಕೆ ಮನೆಗೆ ಬೀಗ ಹಾಕಿ ಕುಟುಂಬ ಸಮೇತರಾಗಿ ಚರ್ಚ್‌ಗೆ ತೆರಳಿದ್ದರು. ಪ್ರಾರ್ಥನೆ ಮುಗಿಸಿ ರಾತ್ರಿ 7.45ಕ್ಕೆ ವಾಪಸಾಗಿದ್ದರು. ಬೀಗ ತೆಗೆದು ಮನೆಯೊಳಗಡೆ ಬಂದು ನೋಡಿದಾಗ ಮನೆಯ ಹಂಚುಗಳನ್ನು ತೆಗೆದು ಯಾರೋ ಮನೆಯೊಳಗಡೆ ಪ್ರವೇಶಿಸಿ ಕೋಣೆಯಲ್ಲಿ ಬೀಗ ಹಾಕಿದ್ದ ಕಬ್ಬಿಣದ ಕಪಾಟಿನ ಬಾಗಿಲು ಮುರಿದು ಬ್ಯಾಗ್‌ನಲ್ಲಿದ್ದ 20 ಗ್ರಾಂನ ಚಿನ್ನದ ಸರ, 8 ಗ್ರಾಂನ ಚಿನ್ನದ ಒಂದು ಜತೆ ಬೆಂಡೋಲೆ, 4 ಗ್ರಾಂನ ಉಂಗುರ, ಕೋಣೆಯ ಕಪಾಟಿನಲ್ಲಿ ಬಾಕ್ಸ್‌ನಲ್ಲಿಟ್ಟಿದ್ದ ಸುಮಾರು 4,000 ರೂ. ನಗದು ಕಳವು ಮಾಡಿದ್ದಾರೆ. ಕಳವಾದ ಆಭರಣಗಳ ಒಟ್ಟು ಮೌಲ್ಯ 1.20 ಲ.ರೂ. ಆಗಿರಬಹುದು ಎಂದು ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next