Advertisement

ತಿರುಪತಿ ಆಭರಣಗಳು ಏನಾದವು?

12:42 PM Sep 03, 2018 | Team Udayavani |

ನವದೆಹಲಿ: “ವಿಜಯನಗರದ ರಾಜ ಶ್ರೀ ಕೃಷ್ಣದೇವರಾಯ 16ನೇ ಶತಮಾನದಲ್ಲಿ ತಿರುಪತಿ ದೇಗುಲಕ್ಕೆ ನೀಡಿದ್ದ ಚಿನ್ನದ ಆಭರಣಗಳೇನಾದವು?’ ಹೀಗೆಂದು ತಿರುಪತಿ ದೇವಸ್ಥಾನ, ಭಾರತೀಯ ಪುರಾತತ್ವ ಇಲಾಖೆ, ಆಂಧ್ರ ಪ್ರದೇಶ ಸರ್ಕಾರ, ಕೇಂದ್ರದ ಸಂಸ್ಕೃತಿ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಹಕ್ಕು ಆಯೋಗ ಪ್ರಶ್ನೆ ಮಾಡಿದೆ. ಇದರ ಜತೆಗೆ ತಿರುಪತಿ ದೇಗುಲವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡುವ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿಯನ್ನೂ ಪ್ರಶ್ನಿಸಿದೆ.

Advertisement

ಬಿ.ಕೆ.ಎಸ್‌.ಆರ್‌. ಅಯ್ಯಂಗಾರ್‌ ಎಂಬುವರು ತಿರುಪತಿ ಕ್ಷೇತ್ರವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವ ಕುರಿತು ಪ್ರಧಾನಿ ಕಾರ್ಯಾಲಯ ಏನು ಕ್ರಮ ಕೈಗೊಂಡಿದೆ ಎಂದು ಮಾಹಿತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಮುಖ್ಯ ಆಯುಕ್ತ ಈ ಪ್ರಶ್ನೆ ಮಾಡಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next