Advertisement

Kasaragod ವಾಹನ ಅಪಘಾತ: ವರನ ತಂದೆ ಸಾವು

12:38 AM May 11, 2024 | Team Udayavani |

ಕಾಸರಗೋಡು: ಪುತ್ರನ ವಿವಾಹ ನಿಶ್ಚಯ ಕಳೆದು ವಾಪಸಾಗುತ್ತಿದ್ದಾಗ ನಡೆದ ವಾಹನ ಅಪಘಾತದಲ್ಲಿ ವರನ ತಂದೆ ಸಾವಿಗೀಡಾದ ಘಟನೆ ನಡೆದಿದೆ. ಮಾಲೋಂ ಪೂಂಜದ ಕಲ್ಲಾನಿಕಾಟ್‌ನ ವಿನ್ಸೆಂಟ್‌ (60) ಸಾವಿಗೀಡಾದರು.

Advertisement

ಪುತ್ರ ರೋಬರ್ಟ್‌ ಅವರ ವಿವಾಹ ನಿಶ್ಚಿತಾರ್ಥ ಬಳಿಕ ಕರುವನ್‌ಚಾಲ್‌ನ ನೂತನ ಮನೆಗೆ ವಾಪಸಾಗುತ್ತಿದ್ದಾಗ ವಿನ್ಸೆಂಟ್‌ ಸಂಚರಿಸುತ್ತಿದ್ದ ಸ್ಕೂಟರ್‌ ನಿಯಂತ್ರಣ ಕಳೆದುಕೊಂಡು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾದರು.

ನಿಶ್ಚಿತಾರ್ಥಕ್ಕೆ ಹೋಗಿದ್ದ ಇತರರು ಇನ್ನೊಂದು ವಾಹನದಲ್ಲಿ ಮನೆಗೆ ವಾಪಸಾಗಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next