Advertisement

Wheeling: ಮೇಲ್ಸೇತುವೆಯಿಂದ ಎರಡು ಸ್ಕೂಟಿಗಳನ್ನು ಎಸೆದು ಪುಂಡರಿಗೆ ಶಾಸ್ತಿ!

01:51 AM Aug 18, 2024 | Team Udayavani |

ನೆಲಮಂಗಲ: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟಿಗಳಲ್ಲಿ ವ್ಹೀಲಿಂಗ್‌ ಮಾಡುತ್ತಾ ಪ್ರಯಾಣಿಕರಲ್ಲಿ ಭೀತಿ ಸೃಷ್ಟಿಸಿದ್ದ ಪುಂಡರನ್ನು ಅಡ್ಡಗಟ್ಟಿದ ಸಾರ್ವಜನಿಕರು ಹಾಗೂ ಹೆದ್ದಾರಿ ಪ್ರಯಾಣಿಕರು ಪುಂಡರ ಎರಡು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿ, ಮೇಲ್ಸೇತುವೆಯಿಂದ ಕೆಳಗಡೆ ಎಸೆದು ಬುದ್ಧಿ ಕಲಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವೀಡಿಯೋ ವೈರಲ್‌ ಆಗಿದೆ. ಆ. 15ರಂದು ಬೆಂಗಳೂರಿನಿಂದ ತುಮಕೂರು ಕಡೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಕಲಿ ನಂಬರ್‌ ಪ್ಲೇಟ್‌ನ ಎರಡು ಸ್ಕೂಟಿಗಳಲ್ಲಿ ನಾಲ್ವರು ಪುಂಡರು ವ್ಹೀಲಿಂಗ್‌ ಮಾಡುತ್ತಿದ್ದರು. ಅಡಕಮಾರನಹಳ್ಳಿ ಸಮೀಪದ ಹೆದ್ದಾರಿ ಮೇಲ್ಸೇತುವೆ ಬಳಿ ಕೆಲವು ಹೆದ್ದಾರಿ ಪ್ರಯಾಣಿಕರು ಅಡ್ಡಗಟ್ಟಿ ಪ್ರಶ್ನಿಸುತ್ತಿದ್ದಂತೆ ಪುಂಡರು ವಾಹನ ಬಿಟ್ಟು ಪರಾರಿಯಾದರು.

ಅವರಿಗೆ ಪಾಠ ಕಲಿಸುವ ಉದ್ದೇಶದಿಂದ ಹೆದ್ದಾರಿ ಪ್ರಯಾಣಿಕರು, ಸಾರ್ವಜನಿಕರು ಮೇಲ್ಸೇತುವೆ ಮೇಲಿಂದ ಸ್ಕೂಟಿಗಳನ್ನು ಕೆಳಗೆ ಎಸೆದರು. ಶೋಕಿಗಾಗಿ ವ್ಹೀಲಿಂಗ್‌ ಮಾಡುವವರಿಗೆ ಈ ಘಟನೆ ಎಚ್ಚರಿಕೆಯ ಘಂಟೆಯಾಗಿದೆ. ನೆಲಮಂಗಲ ಸಂಚಾರ ಪೊಲೀಸ್‌ ಠಾಣೆ ಅಧಿಕಾರಿಗಳು ಮತ್ತು ಸಿಬಂದಿ ಸ್ಕೂಟಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next