Advertisement

TN Governor 3 ವರ್ಷದಿಂದ ಏನು ಮಾಡುತ್ತಿದ್ದಿರಿ? ಸುಪ್ರೀಂಕೋರ್ಟ್‌

09:05 PM Nov 20, 2023 | Team Udayavani |

ನವದೆಹಲಿ:”ಮೂರು ವರ್ಷಗಳಿಂದ ತಮಿಳುನಾಡು ರಾಜ್ಯಪಾಲರು ವಿಧೇಯಕಗಳನ್ನು ಅಂಗೀಕರಿಸದೆ ಏನು ಮಾಡುತ್ತಿದ್ದರು’ ಎಂದು ಸುಪ್ರೀಂಕೋರ್ಟ್‌ ಸೋಮವಾರ ಕಟುವಾಗಿ ಪ್ರಶ್ನಿಸಿದೆ.

Advertisement

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ತಮಿಳುನಾಡು ಸರ್ಕಾರ ರಾಜ್ಯಪಾಲ ಆರ್‌.ಎನ್‌.ರವಿ ವಿರುದ್ಧ ಸಲ್ಲಿಸಿದ ಮೊಕದ್ದಮೆ ಕುರಿತ ವಿಚಾರಣೆ ಮುಂದುವರಿಸಿದ ಸಂದರ್ಭದಲ್ಲಿ ಈ ಪ್ರಶ್ನೆ ಮಾಡಿದೆ. “2020ರ ಜನವರಿಯಿಂದ ವಿಧೇಯಕಗಳಿಗೆ ಸಹಿ ಹಾಕಲಾಗಿರಲಿಲ್ಲ.

ನ್ಯಾಯಪೀಠದ ಪ್ರಶ್ನೆಯ ಬಳಿಕ ರಾಜ್ಯಪಾಲರು ಅವುಗಳ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅಂದರೆ 3 ವರ್ಷಗಳ ಕಾಲ ಅವರೇನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದೆ. ಇದು ಒಂದು ರಾಜ್ಯದ ರಾಜ್ಯಪಾಲರಿಗೆ ಸಂಬಂಧಿಸಿದ ವಿಚಾರವಲ್ಲ. ಸಂವಿಧಾನದ 200ನೇ ವಿಧಿಯ ಅನ್ವಯ ರಾಜ್ಯಪಾಲರು ತೀರ್ಮಾನ ಕೈಗೊಳ್ಳುವಲ್ಲಿ ವಿಳಂಬವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next