Advertisement

ಬಿಜೆಪಿ ಗೆಲ್ಲಿಸಿ ಜನತೆಗೆ ಏನಾಗಬೇಕು: ಪರಂ

12:59 PM Apr 06, 2017 | Team Udayavani |

ನಂಜನಗೂಡು: ಮಾಜಿ ಕಂದಾಯ ಸಚಿವ ವಿ  ಶ್ರೀನಿವಾಸ ಪ್ರಸಾದರನ್ನು ಸಂಪುಟದಿಂದ ಕೈ ಬಿಡುವ ವಿಷಯದಲ್ಲಿ ತಾವೂ ಸಹ ಭಾಗಿ ಎಂದು  ಪ್ರಧೇಶ ಕಾಂಗ್ರೇಸ್‌ ಅಧ್ಯಕ್ಷ ಹಾಗೂ ರಾಜ್ಯದ ಗೃಹ ಸಚಿವರಾದ ಪರಮೇಶ್ವರ  ಹೇಳಿಕೊಂಡರು . ನಂಜನಗೂಡಿನ ಉಪ ಚುನಾವಣಾ ಪ್ರಚಾರಕ್ಕೆಂದು ನಗರಕ್ಕೆ ಆಗಮಿಸಿದ ಅವರನ್ನು  ಲೋಕೋಪಯೋಗಿ ಸಚಿವ ಡಾ ಎಚ್‌ ಸಿ ಮಹದೇವಪ್ಪನವರ ಮನೆಯಲ್ಲಿ ಪತ್ರಿಕೆ ಮಾತನಾಡಿಸಿದಾಗ ಅವರು ಮೇಲಿನಂತೆ ಹೇಳಿದರು.

Advertisement

ಇಲ್ಲಿ ಪ್ರಸಾದರನ್ನು ಅವಮಾನಿಸಿಲ್ಲ ಎಂದ ಅವರು ಪಕ್ಷದ  ವರಿಷ್ಠ ಮಂಡಳಿಯ ಅನುಮತಿ ಪಡೆದೇ ಪ್ರಸಾರನ್ನು ಕೈ ಬಿಡಲಾಗಿತ್ತು  ಎಂದರು  ಅನಾರೋಗ್ಯದಿಂದ ನರಳುತ್ತಿದ್ದ  ಅವರು ವಿಶ್ರಾಂತಿ ಪಡೆಯಲಿ ಎಂಬ ಉದ್ಧೇಶ ನಮಗಿತ್ತು ಎಂದ ಅವರು  ಪ್ರಸಾದ್‌ ಪಕ್ಷ ತೊರೆದಿದ್ದರಿಂದ ಕಾಂಗ್ರೇಸ್‌ ಗೆ ಎನೂ ನಷ್ಠವಾಗಿಲ್ಲ ಆಗುವದೂ ಇಲ್ಲಾ ಎಂದು ಪರಮೇಶ್ವರ ಪ್ರತಿಪಾದಿಸಿದರು  ಈ ಚುನಾವಣೆಯಲ್ಲಿ ನಾವು ಗೇದಾಗಿದೆ ಹಾಗಾಗಿ ಇಲ್ಲಿ ಪ್ರಸಾದರ ಬಲವೂ ಇಲ್ಲಾ ಬಿ ಜೇಪಿಯ ಬಲವೂ ಇಲ್ಲಾ ಎಂದು ಅವರು ಹೇಳಿದರು.

ನಾವು ಗೆದ್ದಾಗಿದೆ ಎಂದ ಅವರು ಗುಂಡ್ಲುಪೇಟೆ ಹಾಗೂ ನಂಜನಗೂಡಿನ ಈ ಚುನಾವಣೆಗಳಲ್ಲಿ ನಾವು ಈಗಾಗಲೇ ವಿಜೇತರಾಗಿದ್ಧೇವೆ   ಘೋಷಣೆ  ಮಾತ್ರ ಬಾಕಿ ಇದೆ ಎಂದರು. ಬೀಜೇಪಿ ಗೇಲ್ಲಿಸಿ ಜನತೆಗೆ ಏನಾಗಬೇಕು ಎಂದು ಪ್ರಶ್ನಿಸಿದ ಅವರು ಇಲ್ಲೀ ಕೇಶವ ಮೂರ್ತಿ ಗೆದ್ದರೆ ಅಭಿವೃದ್ದೀ ಕಾರ್ಯ ಮುಂದುವರಿಯುತ್ತೆ  ಹಾಗಾಗಿ ಅಭಿವ್ರದ್ದಿಯನ್ನು ನೋಡಿ ಜನ ಇಲ್ಲಿ ಕಾಂಗ್ರೇಸ್‌  ನ್ನು  ಜನ  ಕೈಹಿಡಿದಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿಯಾದ 5 ತಿಂಗಳಿಗೆ  ಸಚಿವ ಮಹದೇವಪ್ಪ 600 ಕೋಟಿ ಹಣ ತಂದು ಅಭಿವೃದ್ದೀ ಕಾರ್ಯ ಸಾಧಿಸಿದ್ದಾರೆ ಈ ಕೆಲಸವನ್ನು  ಪ್ರಭಾವಿ ಖಾತೆಯ ಸಚಿವರಾಗಿದ್ದ ಪ್ರಸಾದವರೇ ಮಾಡಭಹುತ್ತಲ್ಲ ಎಂದ ಪರಮೇಶ್ವರ ಪ್ರಸಾದರಿಗೆ ಅಭಿವೃದ್ದೀ ಬೇಕಾಗಿಲ್ಲ ಹಾಗಾಗಿ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯವಾಗಿದೆ ಎಂದು ಕಿಡಿಕಾರಿದರು. 8 ವರ್ಷ ಶಾಸಕರಾಗಿ ಸಚಿವರಾಗಿ ಏನೂ ಸಾಧಿಸಲಾಗದ  ಪ್ರಸಾದ ಈಗ  ಶಾಸಕರಾಗಿ ಆಯ್ಕೆಯಾದರೆ ಏನು ಮಾಡಿಯಾರು?

ಎಂಬುದರ ಬಗ್ಗೆ ನಂಜನಗೂಡಿನ ಜನತೆಗೆ ಅರಿವಾಗಿದೆ ಹಾಗಾಗಿ  ಇಲ್ಲಿನ ಜನತೆ  ನಮ್ಮ ಕೈ ಹಿಡಿದಿದ್ದಾರೆ ಎಂದು ಅವರು  ಹೇಳಿದರು. ನಂಜನಗೂಡಿನ ಜನತೆಗಾಗಿ ಯಾವುಧೇ ಸಂಪುಟದ ಸಭೆಗಳಲ್ಲಿ  ಅವರು ಹಣಕಾಸಿನ ನೇರವು ಕೇಳಿದ್ದು ತಮ್ಮ ಗಮನಕ್ಕಂತೂ ಬಂದಿಲ್ಲ ಎಂದು ಅವರು ಪ್ರಸಾದರ ಕಾರ್ಯ ವೈಕರಿಯನ್ನು ಟೀಕಿಸಿದರು.

Advertisement

ರಾಜಿನಾಮೇ ಅನಿರೀಕ್ಷತ – 5 ವರ್ಷಗಳ ಅವಧಿಗೆ ಶಾಸಕರಾಗಿ ಅವರನ್ನು ಜನತೆ  ಚುನಾಯಿಸಿದ್ದರು.ಮಂತ್ರಿಯಾಗಿಸಿ ಕಾಂಗ್ರೇಸ್‌  ಅಧಿಕಾರ ನೀಡಿತ್ತು  ಹೊಸಬರ ಅವಕಾಶಕ್ಕಾಗಿ   ಕೈ ಬಿಟ್ಟಿದ್ದು ಪ್ರಸಾದರನ್ನು ಮಾತ್ರ ಅಲ್ಲ   ಸಚಿವ ಸ್ಥಾನದಿಂದ ಕೈ ಬಿಟ್ಟ ಉಳಿದ 13 ಜನರಿಗೆ ಆಗದ  ಆಗದ ಅವಮಾನ ಇವರೊಭರಿಗೆ ಹೇಗಾಯಿತು ಎನ್ನುತ್ತ ಅಧಿಕಾರಕ್ಕಾಗಿ ಪಕ್ಷ ಎನ್ನುವದು ಸೈದ್ದಾಂತಿಕ ರಾಜಕಾರಣವೇ ಎಂದು ಪ್ರಸಾರನ್ನು ಕಟುಕಿದರು.

ಕಾಂಗ್ರೇಸ್‌ ಹಾಗೂ  ಜೆ.ಡಿ ಎಸ್‌ ಬಣಗಳು  ಒಂದಾಗಿ ಕೆಲಸ ಮಾಡುತ್ತಿವೆಯೇ ಎಂದಾಗ  ಕಾಂಗ್ರೇಸ್‌ ಪಕ್ಷ ಹಾಗೂ  ಸರ್ಕಾರ  ಈ ಕುರಿತು ಸರ್ವೆ ನಡೆಸಿಯೇ ಭಲಿಷ್ಠ ಅಭ್ಯರ್ಥೀ ಎಂದು ಬಿಂಬಿತವಾದ  ಕಳಲೆಯನ್ನು ಕಣಕ್ಕಿಳಿಸಿದ್ದೇವೆ ಇದೂ ಸಹ ಹೈಕಾಂಡ್‌ ತಿ,ರ್ಮಾನ ಹಾಗಾಗಿ ನಾವೆಲ್ಲರೂ  ಅದನ್ನು ಗೌರವಿಸಿ ಒಂದಾಗಿ ಇಲ್ಲಿ ಚುನಾವಣಾ ಕೆಲಸ ಮಾಡುತ್ತಿದ್ಧೇವೆ ಎಂದರು.

2018 ರ ಸಾರ್ವತ್ರಕ  ಚುನಾವಣೆಯಲ್ಲಿ ಇಲ್ಲನ ಕೈ ಅಭ್ಯರ್ಥಿ  ಡಾ ಮಹದೇವಪ್ಪನವರಾ ಅಥವಾ ಕೇಶವ ಮೂರ್ತಿಯಾ ಎಂದಿದ್ದಕ್ಕೆ ಉತ್ತರಿಸಿದ ಅವರು  ಇನ್ನೂ ಒಂದು ವರುಷ ಸಮಯವಿದೆ ಆ ಚುನಾವಣೆ ಘೋಷಣೆ ಯಾದಾಗ ಪಕ್ಷ ತಿರ್ಮಾನಿಸುತ್ತೆ ಎನ್ನುತ್ತ  ಅಡ್ಡಗೋಡೆಯ ಮೇಲೆ ದೀಪವಿಟ್ಟು ಸುಮ್ಮನಾದರು. ರೈತರ ಸಾಲ ಮನ್ನಾ ಎಂದಿದ್ದಕ್ಕೆ   ಅವರು ಪ್ರತಿಕೃಯಸಿ ಪ್ರಧಾನಿಗಳ ಸೂಚನೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಅಲ್ಲಿನ ರೈತರ ಸಹಕಾರಿ ಸಾಲ ಮನ್ನಾ ಮಾಡಿರಬೇಕು  ಇದೇ ಮಾನದಂಡವನ್ನು ಪ್ರದಾನಿ ಎಲ್ಲ ರಾಜ್ಯಗಳಿಗೂ ಅನ್ವಯಿಸಬೇಕಿದೆ ಹಾಗಾದಾಗ ರಾಷದ ಎಲ್ಲ ಕೃಷಿಕರ ಸಾಲಾ ಮನ್ನಾ  ಆಗುತ್ತದೆ ಎಂದರು.

ತಮಿಳುನಾಡಿನ ಉಚ್ಚನ್ಯಾಯಾಲಯದ ಆದೇಶದ ಕುರಿತು ಪ್ರಸ್ಥಾಪಿಸಿದ ಗೃಹ ಸಚಿವರು ಕಾರ್ಯಾಂಗಕ್ಕೆ  ಸಾಲಾ ಮನ್ನಾದಂತಹ ಅತೀ ಮುಖ್ಯವಾದ ಹಣಕಾಸಿನ ವಿಚಾರದಲ್ಲಿ ನ್ಯಾಯಾಲಯ  ಆದೇಶಿಸುವ ಪರಿಪಾಠ  ಸಾಧುವಲ್ಲ ಆಯಾ ರಾಜ್ಯದ ಹಣ ಕಾಸಿನ ಸ್ಥಿತಿಗತಿಗಳ ಮೇಲೆ ಇದು ಅವಲಂಬಿತವಾಗುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು  ಈ ಸಮಯದಲ್ಲಿ  ಡಾ ಎಚ್‌ ಸಿ ಮಹದೇವಪ್ಪ ಹಾಗೂ ಶಾಸಕ ಪಿರಿಯಾ ಪಟ್ಟಣದ ವೆಂಕಟೇಶ ಉಪಸ್ಥತಿತರಿದ್ದರು.

* ಶ್ರೀಧರ್‌ ಆರ್‌ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next