Advertisement
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲಿನ ಡೇರಿಗಳು ರೈತರಿಗೆ ವರದಾನವಾಗಿದ್ದು, ಈ ಎರಡೂ ಸಂಸ್ಥೆಗಳು ಸಂಕಷ್ಟದಲ್ಲಿರುವ ಅನ್ನದಾತ ಆರ್ಥಿಕವಾಗಿ ಚೇತರಿಸಿಕೊಳ್ಳಲು ನೆರವಾಗಿವೆ ಎಂದು ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಸಿಗುತ್ತಿರುವುದರಿಂದ ರೈತರು ನಿರಾತಂಕವಾಗಿ ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಅಲ್ಲದೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಕಾಲದಲ್ಲಿ ಹಣ ನೀಡುತ್ತಿರುವುದು ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
Related Articles
Advertisement
ಶಾಸಕರನ್ನು ಹೊಗಳಿದ ಜಿಲ್ಲಾ ಬ್ಯಾಂಕ್ ಅಧ್ಯಕ್ಷ: ನಮ್ಮ ಬ್ಯಾಂಕ್ನಿಂದ ಹೋಬಳಿ ಮಟ್ಟದಲ್ಲಿ ಆರು ಲಕ್ಷದವರೆಗೂ ಹೈನುಗಾರಿಗೆ ಸಾಲವನ್ನು ಶೇ.25ರಷ್ಟು ಸಹಾಯಧನದಲ್ಲಿ ನೀಡುವುದರ ಜತೆಗೆ ಗೃಹಸಾಲ ನೀಡುತ್ತೇವೆ. ಇದಕ್ಕೆ ಕಾರಣಕರ್ತರು ಶಾಸಕರಾದ ಸಾ.ರಾ.ಮಹೇಶಣ್ಣ ಎಂದು ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಹೊಗಳಿದರು.
ಗ್ರಾಪಂ ಅಧ್ಯಕ್ಷ ಶಿವಶಂಕರ್, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಹದೇವಪ್ಪ, ನಿರ್ದೇಶಕರಾದ ಎ.ಟಿ.ಸೋಮಶೇಖರ್, ಅಮಿತ್ ದೇವರಹಟ್ಟಿ, ಕೆ.ಎಂ.ಶಿವಶಂಕರ್, ಎಸ್ಬಿಎಂ ಮಂಜು, ರಮೇಶ್, ಸಹಕಾರ ಮಹಾಮಂಡಲದ ಜಯರಾಂ, ಮೈಮುಲ್ ಅಧ್ಯಕ್ಷ ಕೆ.ಜೆ.ಮಹೇಶ್, ನಿರ್ದೇಶಕರಾದ ಈರೇಗೌಡ, ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ವಕ್ತಾರ ಕೆ.ಎಲ್.ರಮೇಶ್,
ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಕುಪ್ಪಳ್ಳಿ ಸೋಮು, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಹಳ್ಳಿ ಗಣೇಶ್, ವಿಎಸ್ಎಸ್ಎನ್ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕರಾದ ಶಿವಕುಮಾರ್ ಮತ್ತಿತರರಿದ್ದರು.