Advertisement

ಕೇಂದ್ರದಿಂದ ಅನುದಾನ ಬರೋಲ್ಲ ಅಂತ ಹೇಳಲು ಕುಮಾರಸ್ವಾಮಿ ಏನ್ ಪ್ರಧಾನಿನಾ ?

09:27 AM Oct 07, 2019 | Team Udayavani |

ಚಿತ್ರದುರ್ಗ: ಕುಮಾರಸ್ವಾಮಿ ಏನ್ ಪ್ರಧಾನಿನಾ, ಕೇಂದ್ರದಿಂದ ಎರಡನೇ ಕಂತು ಹಣ ಬರೋದಿಲ್ಲ ಅಂತಾ ಹೇಳೋದಿಕ್ಕೆ ಅವರಿಗೆ ಏನು ಅಧಿಕಾರ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾರವಾಗಿ ಪ್ರಶ್ನಿಸಿದರು.
ಚಿತ್ರದುರ್ಗ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವಕ್ಕೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

Advertisement

ನೆರೆ ಸಂತ್ರಸ್ತರ ಪರಿಹಾರವಾಗಿ ಇದೊಂದೆ ಕಂತು, ಮತ್ತೆ ಹಣ ಬರೋದಿಲ್ಲ ಎಂದು ಎಚ್ಡಿಕೆ ಹೇಳಿದ್ದಾರೆ ಎಂಬ ಪ್ರಶ್ನೆಗೆ ಗರಂ ಆದರು.

ಅವರಿಗೆಲ್ಲಾ ಅತೃಪ್ತಿ, ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆ ಬೇಜವಾಬ್ದಾರಿಯಿಂದ ಮಾತಾಡಬಾರದು. ಕೇಂದ್ರ ಸರ್ಕಾರ ಎರಡನೇ ಕಂತು ಬಿಡುಗಡೆ ಮಾಡುವುದಾಗಿ ತಿಳಿಸಿದೆ ಎಂದರು.

ಕೇಂದ್ರ ಮೊದಲನೆ ಕಂತಾಗಿ 1200. ಕೋಟಿ ರೂ. ಬಿಡುಗಡೆ ಮಾಡಿದೆ. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಮತ್ತಷ್ಟು ಅನುದಾನ ಬಿಡುಗಡೆ ಮಾಡಿ ರೈತರಿಗೆ ಬೆಳೆ ನಷ್ಟ ಅಂದಾಜು ಮಾಡಿ ಪರಿಹಾರ ಕೊಡಲಾಗುವುದು ಎಂದು ಹೇಳಿದರು.

ಅ. 10 ರಿಂದ 12 ರವರೆಗೆ ವಿಧಾನ ಮಂಡಲದ ಅಧಿವೇಶನ ಇದೆ.
ಅತಿವೃಷ್ಟಿ ಇದೆ ಎಂಬ ಕಾರಣಕ್ಕೆ ಬೆಳಗಾವಿ ಅಧಿವೇಶನ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಳಗಾವಿ ಡಿಸಿ ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದರು.

Advertisement

ಮೈಸೂರು ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. 7ನೇ ತಾರೀಖು ಸಂಜೆ ನಾನು ತೆರಳುತ್ತಿದ್ದೇನೆ ಎಂದು ಬಿಎಸ್ವೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next