Advertisement

ಆರುತ್ತಿಲ್ಲ ಬಂಗಾಲದ ಬೆಂಕಿ : ಟಿಎಂಸಿಯ ಇಬ್ಬರ ಹತ್ಯೆ

04:47 PM Jun 13, 2019 | Team Udayavani |

ಕೋಲ್ಕತಾ: ಲೋಕಸಭೆ ಚುನಾವಣೆಗೂ ಮುನ್ನವೇ ಆರಂಭವಾದ ರಾಜಕೀಯ ಹಿಂಸಾಚಾರದ ಬೆಂಕಿಯಲ್ಲಿ ಪಶ್ಚಿಮ ಬಂಗಾಲ ಈಗಲೂ ಬೇಯುತ್ತಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಘರ್ಷಣೆಗಳು ಸತತವಾಗಿ ವರದಿಯಾಗುತ್ತಿದ್ದು, ಹಲವು ಜೀವಗಳು ಬಲಿಯಾಗಿವೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ, ಸೋಮವಾರ ತಡರಾತ್ರಿ ಕಾನ್‌ಕಿನಾರಾ ಪ್ರದೇಶದಲ್ಲಿ ಗುಂಪೊಂದರ ಮೇಲೆ ದುಷ್ಕರ್ಮಿಗಳು ಬಾಂಬ್‌ ಎಸೆದಿದ್ದು, ಟಿಎಂಸಿಯ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

Advertisement

ಇನ್ನೊಂದೆಡೆ, ಬಿಜೆಪಿ ಹಾಗೂ ಆರೆಸ್ಸೆಸ್‌ ಕಾರ್ಯಕರ್ತರೊಬ್ಬರ ಮೃತದೇಹವು ಸರ್ಪೋಟಾ ಗ್ರಾಮದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಾಂಬ್‌ ಎಸೆತದಲ್ಲಿ ಮೃತಪಟ್ಟ ಮೊಹಮ್ಮದ್‌ ಮುಖಾ¤ರ್‌ ಮತ್ತು ಮೊಹಮ್ಮದ್‌ ಹಲೀಮ್‌ ನಮ್ಮ ಕಾರ್ಯಕರ್ತರಾಗಿದ್ದು, ಬಿಜೆಪಿಯೇ ಈ ಹತ್ಯೆಗೈದಿದೆ ಎಂದು ಟಿಎಂಸಿ ಆರೋಪಿಸಿದೆ. ಇನ್ನು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸಮತುಲ್‌ ದೊಲೋಯ್‌, ಹಲವು ದಿನಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ “ಜೈ ಶ್ರೀ ರಾಮ್‌’ ರ್ಯಾಲಿಗಳನ್ನೂ ಮುನ್ನಡೆಸಿದ್ದರು. ಹೀಗಾಗಿ ಅವರಿಗೆ ಟಿಎಂಸಿಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದವು. ಈಗ ಟಿಎಂಸಿ ಕಾರ್ಯಕರ್ತರೇ ಸಮತುಲ್‌ರನ್ನು ಕೊಲೆ ಮಾಡಿ, ನೇಣಿಗೇರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ನಿರಂತರ ಹಿಂಸಾಚಾರ, ಘರ್ಷಣೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ 10ರ ಪೈಕಿ 8 ಮಂದಿ ಟಿಎಂಸಿ ಕಾರ್ಯಕರ್ತರು
ವಿದ್ಯಾಸಾಗರ್‌ ಪುತ್ಥಳಿ ಮರುಸ್ಥಾಪನೆ ಕಾರ್ಯಕ್ರಮದ ಬಳಿಕ ಮಾತನಾ ಡಿದ ಸಿಎಂ ಮಮತಾ, ಚುನಾವಣೋತ್ತರ ಹಿಂಸಾಚಾರ ದಲ್ಲಿ ಮಡಿದ 10 ಮಂದಿಯ ಪೈಕಿ 8 ಮಂದಿ ಟಿಎಂಸಿ ಕಾರ್ಯಕರ್ತರು, ಉಳಿದ ಇಬ್ಬರು ಬಿಜೆಪಿ ಕಾರ್ಯಕರ್ತರು ಎಂದು ಹೇಳಿದ್ದಾರೆ. ಜತೆಗೆ, ಪ್ರತಿಯೊಂದು ಸಾವೂ ದುರದೃಷ್ಟಕರ. ಎಲ್ಲ 10 ಮಂದಿಯ ಕುಟುಂಬಕ್ಕೂ ಪರಿಹಾರ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದೂ ದೀದಿ ತಿಳಿಸಿದ್ದಾರೆ. ಇದೇ ವೇಳೆ, ಬಿಜೆಪಿ ಬಂಗಾಲವನ್ನು ಗುಜರಾತ್‌ ಮಾಡಲು ಹೊರಟಿದೆ. ಆದರೆ, ನಾನು ಜೈಲಿಗೆ ಬೇಕಿದ್ದರೂ ಹೋಗುತ್ತೇನೆಯೇ ಹೊರತು, ಬಿಜೆಪಿಯ ಯೋಜನೆ ಸಫ‌ಲವಾಗಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.

Advertisement

ದೀದಿ ಭಾಷಣವೇ ಘರ್ಷಣೆಗೆ ಕಾರಣ: ಬಿಜೆಪಿ
ಮೂವರ ಸಾವಿಗೆ ಕಾರಣವಾದ ಸಂದೇಶ್‌ಖಾಲಿ ಹಿಂಸಾಚಾರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಪ್ರದೀಪ್‌ ಮತ್ತು ಸುಕಾಂತಾ ಅವರು ಮನೆಗಳಲ್ಲಿ ಮಲಗಿದ್ದರು. ಟಿಎಂಸಿ ಕಾರ್ಯಕರ್ತರು ಅವರನ್ನು ಹೊರಗೆ ಎಳೆದೊಯ್ದು ಹತ್ಯೆಗೈದರು. ಮಮತಾ ಅವರ ನಿರ್ದೇಶನದ ಮೇರೆಗೆ ತಪ್ಪಿತಸ್ಥರನ್ನು ಇನ್ನೂ ಪೊಲೀಸರು ಬಂಧಿಸುತ್ತಿಲ್ಲ ಎಂದು ರಾಯ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next