Advertisement

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

01:00 AM Sep 21, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಉಂಟಾಗಿರುವ ಪ್ರವಾಹವು ಈಗ 2 ರಾಜ್ಯಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರದ ಅಡಿಯಲ್ಲಿ ಬರುವ ದಾಮೋದರ್‌ ವ್ಯಾಲಿ ಕಾರ್ಪೊರೇಶನ್‌ ಝಾರ್ಖಂಡ್‌ನ‌ ಮೈಥಾನ್‌, ಪಂಚೇತ್‌ ಅಣೆಕಟ್ಟುಗಳಿಂದ ನಿರಂತರವಾಗಿ ನೀರು ಬಿಡುಗಡೆ ಮಾಡುತ್ತಿರುವುದೇ ಪ.ಬಂಗಾಲದಲ್ಲಿ ಪ್ರವಾಹ ಉಂಟಾಗಲು ಕಾರಣ ಎನ್ನುವುದು ಸಿಎಂ ಮಮತಾ ಅವರ ಆರೋಪ.

Advertisement

ಈ ಹಿನ್ನೆಲೆಯಲ್ಲಿ ಪ್ರತಿಭಟನಾರ್ಥವಾಗಿ ಮಮತಾ ಅವರು ಶುಕ್ರವಾರ ಏಕಾಏಕಿ ಝಾರ್ಖಂಡ್‌ನಿಂದ ಬರುವ ಎಲ್ಲ ಮಾದರಿಯ ವಾಹನಗಳಿಗೆ ನಿರ್ಬಂಧ ವಿಧಿಸಿದ್ದಾರೆ. ಸಿಎಂ ಆದೇಶದಂತೆ ಝಾರ್ಖಂಡ್‌ ಮತ್ತು ಪ. ಬಂಗಾಲ ನಡುವೆ 3 ದಿನಗಳ ಕಾಲ ಎಲ್ಲ ಮಾದರಿಯ ವಾಹನಗಳ ಪ್ರಯಾಣಕ್ಕೆ ನಿರ್ಬಂಧಿಸಲಾಗಿದೆ. ಹೀಗಾಗಿ, ಝಾರ್ಖಂಡ್‌ ಮತ್ತು ಪಶ್ಚಿಮ ಬಂಗಾಲ ನಡುವಣ ಗಡಿ ಪ್ರದೇಶದಲ್ಲಿ ಸರಕು ತುಂಬಿದ ಲಾರಿಗಳು ಮುಂದೆ ಸಂಚರಿಸಲಾಗದೇ ಸಾಲಾಗಿ ನಿಂತಿವೆ.

ಲಾರಿಗಳ ಚಾಲಕರಿಗೆ ಕಳ್ಳಕಾಕರಿಂದ ಸರಕು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದ್ದು, ಮತ್ತೂಂದೆಡೆ ಅವರು ಆಹಾರ ಮತ್ತು ಶೌಚ ಕಾರ್ಯಗಳಿಗೂ ಪರದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next