Advertisement

ನಮಗೆ ಸಿಎಎ ಬೇಡ : ಕಾಯ್ದೆ ವಿರುದ್ಧ ನಿಲುವಳಿ ಪ.ಬಂಗಾಲ ವಿಧಾನ ಸಭೆಯಲ್ಲಿ ಅಂಗೀಕಾರ

10:06 AM Jan 28, 2020 | Team Udayavani |

ಕೊಲ್ಕೊತ್ತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಕ್ಕೆ ಪಶ್ಚಿಮ ಬಂಗಾಲದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ತೀವ್ರ ವಿರೋಧಿ ವ್ಯಕ್ತಪಡಿಸಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದ ಸಿಎಎ ವಿರೋಧಿ ನಿಳುವಳಿ ಅಂಗೀಕಾರಗೊಂಡಿದೆ. ಈ ಮೂಲಕ ಪಂಜಾಬ್, ಕೇರಳ ಮತ್ತು ರಾಜಸ್ಥಾನಗಳ ಬಳಿಕ ಸಿಎಎ ಜಾರಿ ವಿರುದ್ಧ ನಿಲುವಳಿ ಅಂಗೀಕರಿಸಿದ ನಾಲ್ಕನೇ ರಾಜ್ಯವಾಗಿ ಪಶ್ಚಿಮ ಬಂಗಾಲ ಮೂಡಿಬಂದಿದೆ.

Advertisement

ಈ ನಿಲುವಳಿ ಅಂಗೀಕಾರವಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜಸಂಖ್ಯಾ ದಾಖಲಾತಿ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್.ಸಿ.ಆರ್.) ಇವು ಮೂರನ್ನೂ ಸಹ ತನ್ನ ರಾಜ್ಯದಲ್ಲಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಇದು ಕೇವಲ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆಯಲ್ಲ, ಇದು ನಮ್ಮೆಲ್ಲರ ಪ್ರತಿಭಟನೆಯಾಗಿದೆ ಮತ್ತು ಈ ಪ್ರತಿಭಟನೆಯ ಮುಂಚೂಣಿಯಲ್ಲಿರುವ ನನ್ನೆಲ್ಲಾ ಹಿಂದೂ ಸಹೋದರರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ‘ನಾವು ಸಿಎಎ, ಎನ್.ಪಿ.ಆರ್. ಮತ್ತು ಎನ್.ಆರ್.ಸಿ.ಗಳಿಗೆ ನಮ್ಮ ರಾಜ್ಯದಲ್ಲಿ ಅವರಕಾಶ ನೀಡುವುದಿಲ್ಲ ಮತ್ತು ನಾವು ಶಾಂತಿಯುತವಾಗಿಯೇ ಹೋರಾಡುತ್ತೇವೆ’ ಎಂದೂ ದೀದಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಜನವರಿ 25ರಂದು ಸಿಎಎ ವಿರುದ್ಧ ರಾಜಸ್ಥಾನ ಸರಕಾರ ವಿಧಾನಸಭೆಯಲ್ಲಿ ನಿಲುವಳಿಯನ್ನು ಅಂಗೀಕಾರಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next