Advertisement

ಮುಳುಗುತ್ತಿದ್ದ ಪಕ್ಷ ಉಳಿಸಿದ್ದೇವೆ: ಎಚ್‌ಡಿಕೆಗೆ ಶ್ರೀರಾಮುಲು ಟಾಂಗ್‌

06:25 AM May 27, 2018 | |

ನಾಯಕನಹಟ್ಟಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ವಿಧಾನಸಭೆಯಲ್ಲಿ ಬಿಜೆಪಿ ಬೆಳೆಯಲು
ನಾನು ಕಾರಣ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ.

Advertisement

ಜೆಡಿಎಸ್‌ ಮುಳುಗುತ್ತಿದ್ದ ಸಮಯದಲ್ಲಿ ನಾವು ಆ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದೇವೆ ಎಂದು ಮೊಳಕಾಲ್ಮೂರು ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ಟೀಕಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ಅತಿ ಹೆಚ್ಚು,
104 ಸ್ಥಾನಗಳನ್ನು ಪಡೆದಿದ್ದೇವೆ.

ಹೀಗಿದ್ದರೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ನಾವು ಪ್ರತಿಪಕ್ಷದಲ್ಲಿ ಕುಳಿತು ಜನರ ಪರವಾಗಿ ಹೋರಾಟ ನಡೆಸುತ್ತೇವೆ. ಕುಮಾರ ಸ್ವಾಮಿಯವರು ವಿಧಾನಸಭೆಯಲ್ಲಿ ಬಿಜೆಪಿ ಬೆಳೆಯಲು ನಾನು ಕಾರಣ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಜೆಡಿಎಸ್‌ ಮುಳುಗುತ್ತಿದ್ದ ಸಮಯದಲ್ಲಿ ನಾವು ಆ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದೇವೆ.

ನಮ್ಮ ಪಕ್ಷ ಬೆಂಬಲ ನೀಡದಿದ್ದರೆ ಅಂದು ಅವರು ಮುಖ್ಯಮಂತ್ರಿ ಯಾಗುತ್ತಿರಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು ಎಂದು ಕುಟುಕಿದರು.

Advertisement

ತೃತೀಯ ರಂಗದ ಮುಖಂಡರು ಅಧಿಕಾರ ಸಿಗುವ ಸಂದರ್ಭದಲ್ಲಿ ಮಾತ್ರ ಇರುತ್ತಾರೆ, ಅಧಿಕಾರ ದೊರೆಯುವುದಿಲ್ಲವೆಂದು ಖಾತ್ರಿಯಾದ ತಕ್ಷಣ ಜಾಗ ಖಾಲಿ ಮಾಡುತ್ತಾರೆ. ತೃತೀಯ ರಂಗದ ಮುಖಂಡರು ಮಳೆಗಾಲದ ನಾಯಿಕೊಡೆಗಳಿದ್ದಂತೆ (ಅಣಬೆ)ಎಂದು ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next