Advertisement

ಸಿಡಿಲಿಗೆ ಕುಸಿದ ಬಾವಿ: 2 ಲಕ್ಷ  ರೂ. ನಷ್ಟ

11:40 AM May 19, 2018 | Team Udayavani |

ಮುಕ್ಕ: ಗುರುವಾರ ರಾತ್ರಿ ಉಭಯ ಜಿಲ್ಲೆಗಳ ಹಲವು ಕಡೆ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದೆ. 
ಮುಕ್ಕದ ಚೇಳಾçರು ಸಮೀಪ ಬೈಲು ಹೊಸಮನೆಯ ಲಕ್ಷ್ಮೀನಾರಾಯಣ ಶೆಟ್ಟಿ ಅವರ ನೀರಾವರಿ ಬಾವಿಗೆ ಸಿಡಿಲು ಬಡಿದು ಪೂರ್ಣ ಕುಸಿದಿದೆ. ನೀರು ಎಳೆಯುವ ಕಬ್ಬಿಣದ ರಾಡ್‌ಗೆ ಸಿಡಿಲು ಬಡಿದ ಕಾರಣ ಬಾವಿ ಕಟ್ಟೆ ಸಹಿತ ಜರಿದು ಬಿದ್ದಿದೆ. ಸಿಡಿಲು ಮತ್ತು ಭಾರೀ ಮಳೆಯಿಂದಾಗಿ ಬಾವಿ ಕುಸಿದಿದೆ ಎನ್ನಲಾಗಿದ್ದು 2 ಲಕ್ಷ ರೂ.ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Advertisement

ವಿವಿಧೆಡೆ ಗುಡುಗು ಸಹಿತ ಸುರಿದ ಮಳೆಗೆ ಸುರತ್ಕಲ್‌, ಕೃಷ್ಣಾಪುರ ಸೇರಿದಂತೆ ಹಲವೆಡೆ ವಿದ್ಯುತ್‌ ವ್ಯತ್ಯಯವಾಯಿತು. ಮೆಸ್ಕಾಂ ಸಿಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿ ಸರಿಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next