Advertisement

ಬಸವಜ್ಯೋತಿ ಪಾದಯಾತ್ರೆಗೆ ಸ್ವಾಗತ

11:32 AM Dec 15, 2021 | Team Udayavani |

ಭಾಲ್ಕಿ: ಡಾ| ಚನ್ನಬಸವ ಪಟ್ಟದ್ದೇವರ 132ನೇ ಜಯಂತ್ಯುತ್ಸವ ನಿಮಿತ್ತ ಅವರ ಜನ್ಮಸ್ಥಳ ಕಮಲನಗರದಿಂದ ಕೈಗೊಂಡ ಬಸವಜ್ಯೋತಿ ಸಂದೇಶ ಪಾದಯಾತ್ರೆಯನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

Advertisement

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ರವಿವಾರ ಕಮಲನಗರದಿಂದ ಕೈಗೊಂಡ ಪಾದಯಾತ್ರೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬರುತ್ತಿದ್ದಂತೆಯೇ ಭವ್ಯವಾಗಿ ಸ್ವಾಗತಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಲೇಜಿಮ್‌ ಡಾನ್ಸ್‌ ಮಾಡಿ ಗಮನ ಸೆಳೆದರು. ಯುವ ಮುಖಂಡ ಸಾಗರ ಖಂಡ್ರೆ ಸೇರಿದಂತೆ ಭಕ್ತರು ಪಟ್ಟದ್ದೇವರಿಗೆ ಮಾಲಾರ್ಪಣೆ ಸಲ್ಲಿಸಿ ಬಸವಜ್ಯೋತಿ ಸಂದೇಶ ಪಾದಯಾತ್ರೆಗೆ ಬರಮಾಡಿಕೊಂಡರು.

ಈ ವೇಳೆ ಮಹಾಲಿಂಗ ಸ್ವಾಮೀಜಿ, ಶಶಿಧರ ಕೋಸಂಬೆ, ಶರಣಪ್ಪ ಬಿರಾದಾರ್‌, ಬಂಡೆಪ್ಪ ಶರಣರು, ಪ್ರಭು ಡಿಗ್ಗೆ, ಗಣಪತಿ ಬಾವುಗೆ, ಸೋಮನಾಥ ಹೊಸಾಳೆ, ಸಂತೋಷ ಬಿಜಿ ಪಾಟೀಲ್‌, ಶಿವಾನಂದ ಗುಂದಗೆ, ಗಣಪತಿ ಬೋಚರೆ, ಶಿವಪುತ್ರ ದಾಬಶೆಟ್ಟೆ, ಸಂತೋಷ ಹಡಪದ, ಮಲ್ಲಮ್ಮ ಪಾಟೀಲ್‌, ಮಹಾನಂದಾ ದೇಶಮುಖ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next