Advertisement

ಬೀಳುವ ಹಂತದಲ್ಲಿ ಸ್ವಾಗತ ಕಮಾನು

03:18 PM Aug 23, 2019 | Suhan S |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪ್ರಸಿದ್ಧ ಪ್ರವಾಸಿ ಕೇಂದ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ವಿವಿಧೆಡೆಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ ಶ್ರೀರಂಗಪಟ್ಟಣದಲ್ಲಿ ಕೆಲ ಪ್ರವಾಸಿ ತಾಣಗಳ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು. ಬಹುತೇಕ ಸ್ವಾಗತ ಕಮಾನುಗಳು ನಿರ್ವಹಣೆ ಕೊರತೆಯಿಂದ ಕುಸಿದು ಬೀಳುವ ಹಂತದಲ್ಲಿವೆ.

Advertisement

ಮೈಸೂರು – ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಶ್ರೀರಂಗಪಟ್ಟಣದ ಸುತ್ತಲೂ ಕಾವೇರಿ ನದಿ ಸುತ್ತಲೂ ಹರಿಯುವುದರಿಂದ ಇದೊಂದು ದ್ವೀಪವೆಂದೇ ಹೇಳಬಹುದು. ಪ್ರತಿದಿನ ದೇಶ ವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ.

ಪ್ರವಾಸಿಗರ ಅನುಕೂಲಕ್ಕೆಂದು ಕಳೆದ 15 ವರ್ಷಗಳ ಹಿಂದೆ ಆಯಾ ಪ್ರವಾಸಿ ತಾಣಗಳ ರಸ್ತೆ ಸಮೀಪ ಪ್ರವಾಸೋದ್ಯಮ ಹಾಗೂ ಪುರಸಭೆ ಕಬ್ಬಿಣದ ಸ್ವಾಗತ ಕಮಾನುಗಳನ್ನು ನಿರ್ಮಿಸಿ ಪ್ರವಾಸಿ ತಾಣಗಳಿಗೆ ಹೋಗುವ ಮಾರ್ಗ ಸೂಚನೆಗಳ ಹೆಸರುಗಳನ್ನೂ ಬರೆಯಲಾಗಿತ್ತು.

ಯಾವ್ಯಾವ ಫ‌ಲಕಗಳು: ಮೈಸೂರು – ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತ, ಪಟ್ಟಣದ ಕೋಟೆ ಬಾಗಿಲು ವೃತ್ತ, ಗಂಜಾಂ ರಸ್ತೆ, ಪಿಎಂಸಿ ಗೇಟ್‌ನ ಆನೆಕೋಟೆ ರಸ್ತೆ ಹಾಗೂ ಪಶ್ಚಿಮವಾಹಿನಿ ಬಳಿ ಮಾರ್ಗ ಸೂಚಿ ಫ‌ಲಕಗಳು ಹಾಗೂ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು.

ಕೋಟೆ ಬಾಗಿಲ ವೃತ್ತದಲ್ಲಿ ಕಳೆದ 5 ವರ್ಷಗಳ ಹಿಂದ ತುಕ್ಕು ಹಿಡಿದ್ದಿದ್ದ ಕಂಬಗಳು ಗಾಳಿ, ಮಳೆಗೆ ನೆಲಕ್ಕುರುಳಿವೆ. ಉಳಿದಿರುವ ಕಮಾನು ಗೇಟುಗಳು ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಶಿಥಿಲ ಗೊಂಡು ಯಾವುದೇ ಸಂದರ್ಭದಲ್ಲಾದರೂ ಬೀಳುವ ಹಂತ ತಲುಪಿವೆ.

Advertisement

ಅಧಿಕಾರಿಗಳ ನಿರ್ಲಕ್ಷ್ಯ: ರಸ್ತೆಯ ಎರಡೂ ಬದಿಯಲ್ಲಿ ಕಬ್ಬಿಣದ ಕಮಾನುಗಳನ್ನು ನೆಟ್ಟು ನಿರ್ಮಿಸಲಾಗಿತ್ತು. ಈಗ ಈ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಯಾವ ಸಂದರ್ಭದಲ್ಲಾದರೂ ಮುರಿದು ಬೀಳುವ ಅಪಾಯದ ಅಂಚಿನಲ್ಲಿವೆ. ಆದರೂ, ಪ್ರವಾಸೋದ್ಯಮ ಹಾಗೂ ಪುರಸಭೆ ಗಮನಹರಿಸುತ್ತಿಲ್ಲ.

ಈಗಾಗಲೇ ಪುರಸಭೆಯ ಅಧಿಕಾರಿಗಳಿಗೆ ಹಲವಾರು ಬಾರಿ ಪ್ರಗತಿಪರ ಸಂಘಟನೆಗಳ ಮುಖಂಡರು ದೂರು ನೀಡಿದ್ದರು ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸಿ ನಿರ್ಲಕ್ಷಿಸುತ್ತಿದ್ದಾರೆ.

ಬೀಳುವ ಹಂತದಲ್ಲಿ: ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿನ ಬೇಸಿಗೆ ಅರಮನೆ, ಗುಂಬಸ್‌, ಶ್ರೀನಿಮಿಷಾಂಬ ದೇವಾಲಯ, ಗೋಸಾಯಿ ಘಾಟ್ ಹಾಗೂ ಸಂಗಮಕ್ಕೆ ಹೋಗಬೇಕಿದ್ದು, ಇದೀಗ ಕಮಾನು ಗೇಟಿರುವ ಬಳಿಯಲ್ಲಿ ಆಟೋ ನಿಲ್ದಾಣಗಳಿವೆ.

ಆಟೋ ಚಾಲಕರು ಪ್ರಯಾಣಿಕರು ಆ ಸ್ಥಳದಲ್ಲೇ ಯಾವಾಗಲು ಇರುವುದರಿಂದ ಜನನಿಬಿಡದ ಪ್ರದೇಶವಾಗಿದೆ. ಅಕಸ್ಮಾತ್‌ ತುಕ್ಕು ಹಿಡಿದಿರುವ ಕಂಬಗಳು ಗಾಳಿ ಮಳೆಗೆ ಯಾವಾಗ ಬೇಕಾದರೂ ಬೀಳಬಹುದು. ಈಗಲಾದರೂ ಪುರಸಭೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next