Advertisement

ಸಿಂದಗಿ: ವೀಕೆಂಡ್ ಕರ್ಫ್ಯೂಗೆ ಜನಬೆಂಬಲ

07:02 PM Jan 08, 2022 | Team Udayavani |

ಸಿಂದಗಿ: ಓಮಿಕ್ರಾನ್ ಹಾವಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದ್ದು ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಿದ ಹಿನ್ನಲೆಯಲ್ಲಿ ಸಾರ್ವಜನಿಕರ ಓಡಾಟ ಹಾಗೂ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡುವ ಮೂಲಕ ವರ್ಷದ ಮೊದಲ ವೀಕೆಂಡ್ ಮೊದಲ ದಿನ ಶನಿವಾರ ಬೆಂಬಲ ನೀಡಿದರು.

Advertisement

ತಿಂಗಳ ಎರಡನೇ ಶನಿವಾರ ಇರುವುದರಿಂದ ಸಹಜವಾಗಿ ಸರಕಾರಿ ಕಚೇರಿಗಳು ರಜೆ ಇದ್ದವು. ಶಾಲಾ-ಕಾಲೇಜುಗಳು ರಜೆ ನೀಡಲಾಗಿತ್ತು. ಅಗತ್ಯ ವಸ್ತುಗಳ ಸೇವೆ ಸೌಲಭ್ಯವಿತ್ತು. ಆಸ್ಪತ್ರೆ, ಔಷಧಿ ಅಂಗಡಿಗಳು, ಕೆಲವು ಕಿರಾಣಿ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳು ತಮ್ಮ ವ್ಯಾಪಾರ ವಹಿವಾಟು ನಡೆಸಿದವರು. ಹೊಟೇಲ್‌ಗಳಲ್ಲಿ ಹೆಚ್ಚಾಗಿ ಪಾರ್ಸ ನೀಡಿದರು. ಬಸ್ ಸಂಚಾರ, ಪಟ್ಟಣದಲ್ಲಿ ಆಟೋ ಸಂಚಾರವಿತ್ತು. ಕೆಲವು ಜನ ಜನರು ಬೈಕ್‌ಗಳಲ್ಲಿ ಓಡಾಟ ನಡೆಸುತ್ತಿದ್ದರು. ಬಸ್‌ಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು. ದ್ವಿಚಕ್ರ, ಕಾರುಗಳಲ್ಲಿ ವಾಹನ ಸವಾರರು ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದರು.

ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಕೊಂಡು ಮಾಸ್ಕ್ ಧರಿಸದೇ ಇರುವ ಪಾದಚಾರಿಗಳು, ದ್ವಿಚಕ್ರ, ಕಾರುಗಳಲ್ಲಿನ ವಾಹನ ಸವಾರರು ಮಾಸ್ಕ್ ಧರಿದೆ ಇದ್ದಲ್ಲಿ ಅವರ ಮೇಲೆ ಕ್ರಮ ಕೈಕೊಳ್ಳ ಬೇಕು. ಕೇವಲ ವೀಕೆಂಡ್ ಜಾರಿಮಾಡಿದರೆ ಸಾಲದು. ಸಾರ್ವಜನಿಕರು ಕೋವಿಡ್ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಮೂಲಕ್ ಕೈ ತೊಳೆದುಕೊಳ್ಳ ಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು. ನಾವು ಆರೋಗ್ಯರಾಗಿ ಇರುವ ಮೂಲಕ ಸಮುದಾಯ ಆರೋಗ್ಯವಾಗಿ ಇರುವ ಹಾಗೆ ನಡೆದುಕೊಂಡಾಗ ಮಾತ್ರ ಓಮಿಕ್ರಾನ್ ಹಾವಳಿಯಿಂದ ಪಾರಾಗಲು ಸಾಧ್ಯ ಎಂದು ಸ್ಥಳಿಯ ವೈಧ್ಯರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next