Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:15 AM Sep 28, 2022 | Team Udayavani |

ಮೇಷ:

Advertisement

ರಾಜಕೀಯ ಕ್ಷೇತ್ರದವರಿಗೆ ಅಭಿವೃದ್ಧಿ. ಕ್ರಯ ವಿಕ್ರಯದಲ್ಲಿ ತಾಳ್ಮೆ ಸಹನೆ ಅಗತ್ಯ. ಸ್ವಪ್ರಯತ್ನದಿಂದ ಧನಾಗಮ. ಸಹೋದರಾದಿ ವರ್ಗದಲ್ಲಿ ಪ್ರೋತ್ಸಾಹ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಅರಣ್ಯ ಪ್ರದೇಶ ಸಂಚಾರ. ದೇವತಾ ಸ್ಥಳ ಸಂದರ್ಶನ.

ವೃಷಭ:

ಬಂಧುಗಳಿಂದ ಪ್ರೋತ್ಸಾಹ. ಗಂಟಲು ಸಂಬಂಧ ಆರೋಗ್ಯ ಗಮನಿಸಿ. ಗೌರವದಿಂದ ಕೂಡಿದ ಸ್ಥಾನಮಾನ ಧನಾರ್ಜನೆ. ಕುಟುಂಬ ಸಮೇತ ಸಂಚಾರ ಮಕ್ಕಳ ವಿಚಾರದಲ್ಲಿ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಚಟುವಟಿಕೆ. ಹಿರಿಯರ ಆರೋಗ್ಯ ಗಮನಿಸಿ.

ಮಿಥುನ:

Advertisement

ಬಹು ಮಾತನಾಡಿ ತೊಂದರೆಗೊಳ ಗಾಗದಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಉದ್ಯೋಗದಲ್ಲಿ, ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ. ಸ್ತ್ರೀ ಪುರುಷರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿಕೊಳ್ಳಿ. ಹಿರಿಯರ ಆರೋಗ್ಯ ಉತ್ತಮ.

ಕರ್ಕ:

ಮಕ್ಕಳಲ್ಲಿ ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಪ್ರಯಾಣದಿಂದ ಸುಖ ಸಂತೋಷ. ಬರಬೇಕಾದ ಸಂಪತ್ತಿಗೆ ಪ್ರಯತ್ನಿಸಿದರೆ ಸಿಗುವ ಅವಕಾಶ. ಸಹೋದರರಿಂದ ಸಂತೋಷ ವಾರ್ತೆ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಪ್ರಾಪ್ತಿ. ದೇವತಾ ಕಾರ್ಯ ತೃಪ್ತಿದಾಯಕ.

ಸಿಂಹ:

ಕೆಲಸ ಕಾರ್ಯಗಳ ಗುಣದೋಷ ಅರಿಯದೆ ಉತ್ಸಾಹದಿಂದ ಧುಮುಕದಿರಿ. ಸಮುದ್ರೋತ್ಪನ್ನ ವಸ್ತುಗಳಲ್ಲಿ ಆಸಕ್ತಿ. ದೇವತಾ ಕಾರ್ಯಕ್ಕೆ ಧನವ್ಯಯ. ಮಕ್ಕಳಿಂದ ಸಂತೋಷ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಗೃಹೋಪ ವಸ್ತು ಸಂಗ್ರಹ. ಆರೋಗ್ಯದ ಬಗ್ಗೆ ಗಮನಿಸಿ.

ಕನ್ಯಾ:

ನೀರಿನಿಂದ ಉದ್ಬವಿಸಿದ ಪದಾರ್ಥಗಳ ಕ್ರಯವಿಕ್ರಯದಲ್ಲಿಯೂ, ವಿದೇಶ ವ್ಯವಹಾರ ದಲ್ಲಿಯೂ ಉತ್ತಮ ಲಾಭದಾಯಕ. ವಿದ್ಯಾರ್ಥಿಗಳಿಗೆ ಸಂಶೋಧಕರರಿಗೆ ಅತ್ಯುತ್ತಮ ದಿನ. ಆರೋಗ್ಯದಲ್ಲಿ ಅಭಿವೃದ್ಧಿ. ದಾಂಪತ್ಯ ಸುಖ ಅನುಕೂಲಕರ.

ತುಲಾ:

ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ನೂತನ ಮಿತ್ರರ ಸಮಾಗಮ. ಧರ್ಮ ಕಾರ್ಯದಲ್ಲಿ ಭಾಗವಹಿಸಿದ ತೃಪ್ತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಮೇಲಧಿಕಾರಿಗಳಿಂದ ಗುರುಗಳಿಂದ ಪ್ರೋತ್ಸಾಹ. ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಧನಾರ್ಜನೆ.

ವೃಶ್ಚಿಕ:

ಅಧಿಕ ಶ್ರಮವಹಿಸಿ ಮಿತ್ರರ ಸಹಯೋಗ ದಿಂದ ಕಾರ್ಯ ಸಾಧಿಸಿದ ತೃಪ್ತಿ. ರಫ್ತು ಆಮದು ವ್ಯವ ಹಾರದಲ್ಲಿ ಉತ್ತಮ ಅವಕಾಶ ಅಭಿವೃದ್ಧಿ. ಆಡ್ಯ ಮಹನೀಯರ ಸಂಪರ್ಕದಿಂದ ಸಂತೋಷ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವ ಕಾಲ. ಆಹಾರೋಧ್ಯಮದಲ್ಲಿ ಪ್ರಗತಿ.

ಧನು:

ಗುರು ಹಿರಿಯರಲ್ಲಿ ಮೇಲಧಿಕಾರಿಗಳಲ್ಲಿ ಸಹನೆ ಉದಾರತನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಧನಾರ್ಜನೆಗೆ ಕೊರತೆ ಇರದು. ಅನಗತ್ಯ ವಾರ್ತೆಗಳಿಗೆ ಕಿವಿಕೊಡದಿರಿ. ದಂಪತಿಗಳು ಪಾಲುದಾರರು ಪರಸ್ಪರ ಪ್ರೋತಾಹಿಸಿದರೆ ಉತ್ತಮ ಫ‌ಲ.

ಮಕರ:

ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯ ಲಾಭ. ಮಿತ್ರರಂತೆ ವರ್ತಿಸುವ ವ್ಯಕ್ತಿಗಳಿಂದಲೂ ಜಗಳ ಮಾಡುವ ಪ್ರವೃತ್ತಿಯವರಿಂದಲೂ ದೂರವಿರಿ. ಇಂದು ನಿಮಗೆ ಸ್ವಲ್ಪ ಕಿರಿಕಿರಿ ತೋರಿದರೂ ಬಹಳ ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುವಿರಿ.

ಕುಂಭ:

ಕಾರ್ಮಿಕರಲ್ಲಿ ಸಹೋದರ ಸಮಾನರಲ್ಲಿ ನಿಷ್ಠುರ ಮಾಡದೇ, ಪ್ರೋತ್ಸಾಹಿಸಿ ನಿರೀಕ್ಷಿತ ಶುಭಫ‌ಲ ಅನುಭವಿಸಿ. ದೂರ ಪ್ರಯಾಣದಿಂದ ಉತ್ತಮ ಧನಾರ್ಜನೆ. ರಾಜಕೀಯ ಕ್ಷೇತ್ರದವರಿಗೆ ಉನ್ನತ ಅಧಿಕಾರಿಗಳಿಂದ ಲಾಭ. ವಿದ್ಯಾರ್ಥಿಗಳಿಗೆ ಅಭಿವೃದ್ಧಿ.

ಮೀನ:

ಮಾತೃ ಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿ. ಮಿತ್ರರೊಂದಿಗೆ ಸಹನೆಯಿಂದ ವ್ಯವಹರಿಸಿ. ಕಾರ್ಮಿಕ ವರ್ಗದವರಿಗೆ ಪ್ರೋತಾಹಿಸಿ ನಿರೀಕ್ಷಿತ ಲಾಭ ಪಡೆಯಿರಿ. ಉದ್ಯೋಗದಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ, ಆಳವಾದ ಅಧ್ಯಯನಶೀಲರಿಗೆ ಉತ್ತಮ ಶುಭಫ‌ಲ. ರಾಜಕೀಯ ಕ್ಷೇತ್ರದಲ್ಲಿ ಗುಟ್ಟಿನ ವ್ಯವಹಾರದಿಂದ ಲಾಭ.

Advertisement

Udayavani is now on Telegram. Click here to join our channel and stay updated with the latest news.

Next