Advertisement

ಮಡಿಕೇರಿಯಲ್ಲಿ ನೋವಿನ ನಡುವೆ ನಲಿವು:ಸಂತ್ರಸ್ತರ ಮದುವೆ ಸಂಭ್ರಮ 

11:09 AM Aug 26, 2018 | Team Udayavani |

ಮಡಿಕೇರಿ:ಜಲಪ್ರಳಯದಿಂದ ತತ್ತರಿಸಿ ಹೋಗಿದ್ದ ಮಡಿಕೇರಿಯಲ್ಲಿ ಸಂತ್ರಸ್ತರ ನೋವಿನ ನಡೆವೆಯೂ ಭಾನುವಾರ ಮದುವೆಯ ಸಂಭ್ರಮ ಮನೆ ಮಾಡಿದೆ. 

Advertisement

ಮಕ್ಕಂದೂರಿನಲ್ಲಿ ಭೂ ಕುಸಿತದಿಂದ ಮನೆಯನ್ನೇ ಕಳೆದುಕೊಂಡಿದ್ದ  ಮಂಜುಳ ಆರ್‌. ಅವರ ವಿವಾಹ ಕೇರಳದ ಕಣ್ಣೂರಿನ  ಕೂತುಪರಂಭುವಿನ ರಜೀಶ್‌ ಅವರೊಂದಿಗೆ ಮಡಿಕೇರಿಯ ಓಂಕಾರೇಶ್ವರ ದೇವಾಲಯಲ್ಲಿ ಶಾಸ್ತ್ರೋಕ್ತವಾಗಿ,ಸರಳವಾಗಿ ನಡೆಯಿತು.

 

ಮನೆಯನ್ನು ಕಳೆದುಕೊಂಡ ಬಳಿಕ ಮದುವೆಯನ್ನು ನಿಲ್ಲಿಸಲು ಮಂಜುಳ ಮನೆಯವರು ನಿರ್ಧರಿಸಿದ್ದರು.ಆದರೆ ಸೇವಾ ಭಾರತಿ ಹಾಗೂ ಲಯನ್ಸ್‌ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ವಿವಾಹ ಕಾರ್ಯಕ್ರಮವನ್ನು ನಡೆಸಲಾಗಿದೆ.ಮದುವೆಗೆ ಎಲ್ಲಾ ರೀತಿಯಲ್ಲಿ ನೆರವನ್ನೂ ಎರಡೂ ಸಂಸ್ಥೆಯವರು ನೀಡಿದರು. 

Advertisement

ವಿವಾಹ ಸಮಾರಂಭದಲ್ಲಿ ಮಂಜುಳಾ ಸಂಬಂಧಿಕರು , ರಜೀಶ್‌ ಸಂಬಂಧಿಕರು, ಲಯನ್ಸ್‌, ಸೇವಾ ಭಾರತಿ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next