Advertisement

ಎನ್‌ಆರ್‌ಸಿ ರಾಷ್ಟ್ರವ್ಯಾಪಿ ಜಾರಿ ಖಚಿತ

09:57 AM Dec 02, 2019 | Team Udayavani |

ಬೊಕಾರೋ: ಕೇಂದ್ರ ಸರಕಾರವು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ರಾಷ್ಟ್ರವ್ಯಾಪಿ ಜಾರಿ ಮಾಡುವುದು ಖಚಿತ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಪುನರುಚ್ಚರಿಸಿದ್ದಾರೆ. ಜಾರ್ಖಂಡ್‌ನ‌ ಬೊಕಾರೋದಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳಲ್ಲೂ ಎನ್‌ಆರ್‌ಸಿ ಜಾರಿಯಾಗಲಿದೆ.

Advertisement

ನಮ್ಮ ನೆಲದಲ್ಲಿರುವ ಅಕ್ರಮ ವಲಸಿಗರು ಯಾರು ಎಂಬುದನ್ನು ತಿಳಿಯುವ ಹಕ್ಕು ಎಲ್ಲ ಭಾರತೀಯರಿಗೂ ಇದೆ. ಕೆಲವು ಪಕ್ಷಗಳು ಇದರಲ್ಲೂ ತಪ್ಪು ಹುಡುಕುತ್ತವೆ. ಆದರೆ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದೂ ರಾಜನಾಥ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next