Advertisement
ವಾರಾಣಸಿಯಲ್ಲಿ ಅನಿವಾಸಿ ಭಾರತೀಯರಿಗಾಗಿ ಜ. 21ರಿಂದ 23ರವಗೆ ಆಯೋಜಿಸಲಾಗಿರುವ “15ನೇ ಪ್ರವಾಸಿ ಭಾರತೀಯ ದಿವಸ್’ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಅವರ ಅಧಿಕಾರಾವಧಿಯಲ್ಲಿ ನೀಡಿದ್ದ ಹೇಳಿಕೆಯೊಂದನ್ನು ಅವರ ಹೆಸರೆತ್ತದೆಯೇ ಉದಾಹರಿಸಿ, ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
Related Articles
ಸದ್ಯದಲ್ಲೇ ಭಾರತೀಯರಿಗೆ ಚಿಪ್ ಆಧಾರಿತ ಪಾಸ್ಪೋರ್ಟ್ಗಳನ್ನು ವಿತರಿಸಲಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಪಾಸ್ಪೋರ್ಟ್ ಸೇವಾ ಯೋಜನೆಯಡಿ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ವಿದೇಶಗಳಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗಳಲ್ಲೂ ಈ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು. ಜತೆಗೆ, ಭಾರತ ಮೂಲದ ವಿದೇಶಿ ನಾಗರಿಕ (ಪಿಐಒ) ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ (ಒಸಿಐ) ವೀಸಾ ನೀಡುವಿಕೆ ನಿಯಮಗಳನ್ನು ಸರಳಗೊಳಿಸಲಾಗುತ್ತದೆ ಎಂದೂ ಭರವಸೆ ನೀಡಿದರು.
Advertisement
ಮಾರಿಷಸ್ ಪ್ರಧಾನಿಯ ಭೋಜ್ಪುರಿ ಮಾತುಪ್ರವಾಸಿ ಭಾರತೀಯ ದಿವಸ್ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಅನೇಕ ವಿದೇಶಿ ಗಣ್ಯರು, ತಮ್ಮ ಭಾಷಣದ ವೇಳೆ ಒಂದೆರಡು ಮಾತನ್ನು ಹಿಂದಿಯಲ್ಲಿ ಆಡುವ ಮೂಲಕ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾತ್ ಅವರು ಭೋಜ್ಪುರಿ ಭಾಷೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೇ ವೇಳೆ, ಮುಂದಿನ ವರ್ಷ ಮಾರಿಷಸ್ನಲ್ಲಿ ಭೋಜ್ಪುರಿ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಆ ಸಂದರ್ಭದಲ್ಲಿ ಹರ್ಯಾಣ ಸರ್ಕಾರದ ಸಹಯೋಗದೊಂದಿಗೆ “ಭಗವದ್ಗೀತೆ ಮಹೋತ್ಸವ’ ವನ್ನು ಆಯೋಜಿಸಲಾಗುತ್ತದೆ ಎಂದು ಜುಗ್ನಾತ್ ಘೋಷಿಸಿದರು. ವಾರಾಣಸಿಯಲ್ಲಿ ಅನಿವಾಸಿ ಭಾರತೀಯರಿಗಾಗಿ ಆಯೋಜಿಸಲಾಗಿರುವ 2 ದಿನಗಳ ಸಮಾವೇಶ
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಿಂದಿನ ಹೇಳಿಕೆ ಬಳಸಿ ಟೀಕಿಸಿದ ಪ್ರಧಾನಿ
ಆಧುನಿಕ ತಂತ್ರಜ್ಞಾನದಿಂದ ಭ್ರಷ್ಟಾಚಾರ ತೊಲಗಿದ್ದು, 5.80 ಲಕ್ಷ ಜನರಿಗೆ ಅನುಕೂಲ
ಭ್ರಷ್ಟಾಚಾರ ನಿಗ್ರಹದಿಂದ 4.50 ಲಕ್ಷ ಕೋಟಿ ರೂ. ಹಣ ಸದುಪಯೋಗ: ಮೋದಿ