Advertisement

ಜನರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಿದ್ದೇವೆ: ಸಿದ್ದರಾಮಯ್ಯ

06:20 AM Feb 11, 2018 | |

ಹೊಸಪೇಟೆ: ನವ ಕರ್ನಾಟಕ ನಿರ್ಮಾಣಕ್ಕೆ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಹೊಸ ಭಾಷ್ಯ ಬರೆದಿದ್ದು, ಇದು ಮುಂದು ವರಿಯಲು ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲೇ ಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

Advertisement

ಜನಾಶೀರ್ವಾದ ಯಾತ್ರೆ ಉದ್ಘಾಟನೆ ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ನರೇಂದ್ರ ಮೋದಿ ಯವರು ಪ್ರಧಾನಿಯಾಗಿ ಇಲ್ಲವೆ ಬಿಜೆಪಿ ರಾಷ್ಟ್ರೀಯ ನಾಯಕ ರಂತೆ ಮಾತನಾಡದೆ, ಎರಡು ತಿಂಗಳಿಂದ ಬಿ.ಎ ಸ್‌.ಯಡಿ ಯೂರಪ್ಪ ಮಾತನಾಡಿದ್ದನ್ನೇ ಪುನರುತ್ಛರಿಸಿದಂತಿತ್ತು ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಯಥೇತ್ಛವಾಗಿತ್ತು. ಲೋಕಾಯಕ್ತ ನ್ಯಾ| ಸಂತೋಷ ಹೆಗ್ಡೆ ಇಲ್ಲಿನ ವ್ಯವಸ್ಥೆ ಬಗ್ಗೆ “ರಿ ಪಬ್ಲಿಕ್‌ ಆಫ್ ಬಳ್ಳಾರಿ’ ಎಂಬುದಾಗಿ ತಮ್ಮ ವರದಿಯಲ್ಲಿ ಪ್ರಸ್ತಾ ಪಿಸಿದ್ದರು. ರೆಡ್ಡಿ ಬ್ರದರ್ಸ್‌ ಮತ್ತು ಯಡಿಯೂರಪ್ಪ ಗಣಿ ಲೂಟಿ ಮಾಡಿದರು. ಬಳ್ಳಾರಿಗೆ ಯಾವ ಕೆಟ್ಟ ಹೆಸರು ಇತ್ತೋ ಅದನ್ನು ತೊಡೆದು ಹಾಕಲು ಕಾಂಗ್ರೆಸ್‌ ಪಾದ ಯಾತ್ರೆ ಕೈಗೊಂಡಿದ್ದನ್ನು ಮುಖ್ಯಮಂತ್ರಿ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next