Advertisement

ಸುಪ್ರೀಂ ತೀರ್ಪಿನಿಂದ ನಮಗೆ  ಲಾಭ,ನಷ್ಟ ಎರಡೂ ಇದೆ : ಶ್ರೀಮಂತ ಪಾಟೀಲ್

01:07 PM Nov 13, 2019 | Suhan S |

ಬೆಂಗಳೂರು: ಸುಪ್ರೀಂ ತೀರ್ಪಿನಿಂದ ನಮಗೆ ಲಾಭ,ನಷ್ಟ ಎರಡೂ ಇದೆ ಚುನಾವಣೆಗೆ ನಿಲ್ಲೋಕೆ ನಮಗೆ ಅವಕಾಶ ನೀಡಿದೆ  ಇದು ನಮಗೆ ಸಂತೋಷ ತಂದಿದೆ ಎಂದು ಅನರ್ಹ ಶಾಸಕ ಶ್ರೀಮಂತಪಾಟೀಲ್ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ,ಅನರ್ಹತೆ ಎತ್ತಿಹಿಡಿದಿದ್ದು ಸ್ವಲ್ಪ ನಿರಾಶೆ ಆಗಿದೆ. ಇದು  ಬೇರೆಯವರಂತೆ ನನಗೆ ಅನ್ವಯ ಆಗುತ್ತಿರಲಿಲ್ಲ. ನಾನು ಆ ವೇಳರಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ರಾಜೀನಾಮೆ ಮಾಡಿದ್ದೆ ಈಗ ನಾನು ಕ್ಷೇತ್ರಕ್ಕೆ ತೆರಳಿ ಮತದಾರರನ್ನ ಭೇಟಿ ಮಾಡುತ್ತೇನೆ ಎಂದರು.

ಕ್ಷೇತ್ರಕ್ಕೆ ಭೇಟಿ ಮಾಡಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇನ್ನೂ ಯಾವ ಪಕ್ಷಕ್ಕೆ ಸೇರಬೇಕು ಅಂತ ನಿರ್ಧರಿಸಿಲ್ಲ ಇಂದು ರಾತ್ರಿ ತೆರಳಿದ ನಂತರ ತೀರ್ಮಾನಿಸುತ್ತೇನೆ. ಗೆಲ್ಲುವ ವಿಚಾರದಲ್ಲಿ ನನಗೆ ಸಮಸ್ಯೆಯಿಲ್ಲ ,ರಾಜುಕಾಗೆ ಕಾಂಗ್ರೆಸ್ ಗೆ ಹೋದರೆ ಸಮಸ್ಯೆಯೇನಿಲ್ಲ ನಾನು ನಿರಾಯಾಸವಾಗಿ ಗೆಲ್ಲುತ್ತೇನೆ ಅಧಿಕಾರ ಸ್ಥಾನಮಾನಕ್ಕಾಗಿ ನಾನು ಆಸೆ ಪಟ್ಟವನಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next