Advertisement

ಶ್ರೀಕಾಂತ್‌,ಗೋಪಿಚಂದ್‌ಗೆ ಸಮ್ಮಾನ

03:45 AM Jul 02, 2017 | Team Udayavani |

ಹೊಸದಿಲ್ಲಿ: ಬ್ಯಾಡ್ಮಿಂಟನ್‌ ಕ್ಷೇತ್ರದಲ್ಲಿ ಭಾರೀ ಯಶಸ್ಸು ಸಾಧಿಸಿರುವ ಖ್ಯಾತ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಮತ್ತು ಅವರ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರನ್ನು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾ ಸಚಿವ ವಿಜಯ್‌ ಗೋಯೆಲ್‌ ಸ್ಮರಣಿಕೆ ನೀಡಿ ಸಮ್ಮಾನಿಸಿದರು.

Advertisement

ಇಂಡೋನೇಶ್ಯ ಮತ್ತು ಆಸ್ಟ್ರೇಲಿಯದಲ್ಲಿ ನಡೆದ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಜಯಿಸಿದ ಶ್ರೀಕಾಂತ್‌ ಅವರ ಸಾಧನೆಗೆ ಗೋಯೆಲ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತೀಯ ಬ್ಯಾಡ್ಮಿಂಟನ್‌ ತಾರೆಯರು ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ನಿರ್ವಹಣೆ ನೀಡಲು ಕಾರಣಕರ್ತರಾದ ಮುಖ್ಯ ರಾಷ್ಟ್ರೀಯ ಕೋಚ್‌ ಗೋಪಿಚಂದ್‌ ಅವರನ್ನೂ ಗೋಯೆಲ್‌ ಸಮ್ಮಾನಿಸಿದರು.

ನಮ್ಮನ್ನು ಆಹ್ವಾನಿಸಿ ಸಮ್ಮಾನಿಸಿರುವುದಕ್ಕೆ ಕೃತಜ್ಞತೆಗಳು ಸರ್‌. ಭಾರತೀಯ ಕ್ರೀಡೆಗೆ ನೀವು ಕೊಡುತ್ತಿರುವ ಬೆಂಬಲದಿಂದ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕ್ರೀಡೆಯೂ ಒಳ್ಳೆಯ ರೀತಿಯಲ್ಲಿ ಬೆಳಗಲಿದೆ ಎಂದು ಶ್ರೀಕಾಂತ್‌ ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next