Advertisement

ನಮ್ಮದು ನೈಜ ಹಿಂದುತ್ವದ ಸಿದ್ಧಾಂತ: ಮಿಥುನ್‌ ರೈ

01:27 AM Apr 09, 2019 | Sriram |

ಬೆಳ್ತಂಗಡಿ: ಎಲ್ಲ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆ ಸುವ ನಾವು ನೈಜ ಹಿಂದುತ್ವದ ಸಿದ್ಧಾಂತ ಅನುಸರಿಸುತ್ತಿದ್ದೇವೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಹೇಳಿದರು.

Advertisement

ಬೆಳ್ತಂಗಡಿ ವಿಧಾನಸಭಾ ವ್ಯಾಪ್ತಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.ತನ್ನ ರಾಜಕೀಯ ಸಿದ್ಧಾಂತ ಸ್ಪಷ್ಟವಾಗಿದೆ. ಎಲ್ಲರಿಗೂ ಸಮಪಾಲು ಸಹಬಾಳ್ವೆಯಾಗಿ ಎಲ್ಲ ಜಾತಿ ಧರ್ಮದವ ರನ್ನು ಗೌರವಿಸಿ ಒಟ್ಟಿಗೆ ಮುನ್ನಡೆಸುವುದೇ ನಿಜವಾದ ಹಿಂದೂ ಧರ್ಮ. ಧರ್ಮಗಳ ನಡುವೆ ವೈಷಮ್ಯ ಬೆಳೆಸಿ ರಾಜಕೀಯ ನಡೆಸುವುದಲ್ಲ ಎಂದರು.

ಮಾಜಿ ಶಾಸಕ ವಸಂತ ಬಂಗೇರ ಮನೆಗೆ, ಸೋಮನಾಥೇಶ್ವರ ದೇವಸ್ಥಾನ, ಹೋಲಿ ರೆಡಿಮೆರ್‌ ಚರ್ಚ್‌, ಜುಮಾ ಮಸೀದಿಗೆ ಭೇಟಿ ನೀಡಿದರು. ಕನ್ಯಾಡಿ ರಾಮಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ಆಶೀರ್ವಾದ ಪಡೆದರು. ಮಧ್ಯಾಹ್ನ ಕೊಕ್ಕಡ ಸಾರ್ವಜನಿಕ ಸಭೆಗೂ ಮುನ್ನ ಸೌತಡ್ಕದ ಮಹಾಗಣಪತಿ ದೇವರ ದರ್ಶನ ಪಡೆದರು.

ಕಳಿಯ- ಗೇರುಕಟ್ಟೆ, ಮಡಂತ್ಯಾರಲ್ಲಿ ಸಾರ್ವಜನಿಕ ಸಭೆ, ಸಂಜೆ ಇಂದಬೆಟ್ಟು, ಕಕ್ಕಿಂಜೆ, ಲಾೖಲ ಗ್ರಾಮದ ಕುಂಟಿನಿಯಲ್ಲಿ ಸಭೆ ನಡೆಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಾಸಕ ಹರೀಶ್‌ ಕುಮಾರ್‌, ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next