Advertisement

ನಮ್ಮದು ಕುಟುಂಬ ರಾಜಕಾರಣ ಎನ್ನುವವರದ್ದು ವಿಕೃತ ಮನಸ್ಸು: ಅನಿತಾ 

01:21 PM Mar 05, 2019 | Team Udayavani |

ಮದ್ದೂರು: ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶವಾಗುವುದು ಖಚಿತವಾದ ಬೆನ್ನಲ್ಲೇ ಕುಟುಂಬ ರಾಜಕಾರಣದ ಟೀಕಾಕಾರರಿಗೆ ಜೆಡಿಎಸ್‌ ಶಾಸಕಿ ಅನಿತಾ ಕುಮಾರಸ್ವಾಮಿ ಅವರು  ತಿರುಗೇಟು ನೀಡಿದ್ದು, ಕುಟುಂಬ ರಾಜಕಾರಣ ಎಲ್ಲಿಲ್ಲ, ನಮ್ಮದು ಕುಟುಂಬ ರಾಜಕಾರಣ ಎನ್ನುವವರದ್ದು ವಿಕೃತ ಮನಸ್ಸು ಎಂದು ಕಿಡಿ ಕಾರಿದ್ದಾರೆ. 

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮಗ ರಾಜಕೀಯದಲ್ಲಿಲ್ವಾ?ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಪುತ್ರ ಇಲ್ವಾ ಎಂದು ಪ್ರಶ್ನಿಸಿದರು. 

ನಮ್ಮದು ಕುಟುಂಬ ರಾಜಕೀಯ ಎನ್ನುವ ಹಕ್ಕು ಯಾರಿಗೂ ಇಲ್ಲ. ನಾವು ಹಿಂಬಾಗಿಲ ರಾಜಕೀಯ ಮಾಡುತ್ತಿಲ್ಲ. ಜನರ ಬಳಿ ತೆರಳಿ ಮತ ಪಡೆದು ಬದ್ಧತೆಯಿಂದ  ರಾಜಕೀಯ ಮಾಡುತ್ತಿದ್ದೇವೆ ಎಂದರು. 

ಮಂಡ್ಯದಲ್ಲಿ ಯಾರೇ ಸ್ಪರ್ಧೆ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಚುನಾವಣೆ ಎಂದ ಮೇಲೆ ವಿರೋಧಿಗಳು ಇರಬೇಕಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next