– ವೀರಶೈವರಿಂದ ಹೊರತಾದ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಹೋರಾಟ ಮಾಡುತ್ತಿರುವವರ ನಡೆಯನ್ನು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದ ರೀತಿ ಇದು.
Advertisement
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾನುವಾರ ಅಖೀಲ ಭಾರತ ವೀರಶೈವ ಮಹಾಸಭಾ ಹಮ್ಮಿಕೊಂಡಿದ್ದ “ವೀರಶೈವ-ಲಿಂಗಾಯತ ನಾವೆಲ್ಲಾ ಒಂದೇ ಎನ್ನುವ ಯುವ ಬಾಂಧವ್ಯ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.“ಇವನಾರವ ಇವನಾರವ ಎಂದೆನಿಸದಿರಯ್ಯ. ಇವ ನಮ್ಮವ ಇವ ನಮ್ಮವ ಇವ ನಮ್ಮ ಮನೆಯ ಮಗನೆಂದೆನಿಸಯ್ಯ’ ಎಂದು ಬಸವಣ್ಣನವರು ಹೇಳಿದರು.
Related Articles
“ಸಮಾಜದ ಅನಿಷ್ಟಗಳ ವಿರುದ್ಧ ಹಾಗೂ ಶೋಷಿತರ ಪರ ಹೋರಾಟ ನಡೆಸುವುದು ಬಿಟ್ಟು, ಪರಸ್ಪರ ದೂಷಿಸುವುದು, ಒಬ್ಬರಿಗೊಬ್ಬರು ಬೈದಾಡಿಕೊಳ್ಳಲು ನಾಚಿಕೆ ಆಗುವುದಿಲ್ಲವೇ’ ಎಂದು ಖಾರವಾಗಿ ಕೇಳಿದ ಅವರು, ವೈಯಕ್ತಿಕವಾಗಿ ಸಮಾಜದ ವ್ಯಕ್ತಿಗಳು ಬಲಿಷ್ಠವಾಗಿರಬಹುದು. ಆದರೆ, ಸಂಘಟನಾತ್ಮಕವಾಗಿ ಸಮಾಜ ದುರ್ಬಲಗೊಳ್ಳುತ್ತಿದೆ. ಒಗ್ಗಟ್ಟಿನಲ್ಲಿ ಶಕ್ತಿ ಇದೆ; ವಿಘಟನೆಯಾದರೆ ನಿರ್ನಾಮ ಆಗಲಿದೆ ಎಂದೂ ಎಚ್ಚರಿಸಿದರು.
Advertisement
ಬಸವಣ್ಣನ ವಿರೋಧಿಗಳಲ್ಲಈಗ ಭಿನ್ನರಾಗ ಹಾಡುತ್ತಿರುವವರೂ ಸೇರಿದಂತೆ ಈ ಹಿಂದೆ ಸಮಾಜದ ಮುಖಂಡರು ಕೂಡಲಸಂಗಮದಲ್ಲಿ ನಡೆದ ಸಭೆಯಲ್ಲಿ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಕಲ್ಪ ಮಾಡಿ, ಸಹಿ ಹಾಕಿದ್ದಾರೆ. ಈಗ ಯಾಕೆ ಬೇರೆ ಎಂಬ ಭಾವ ಎಂದು ಕೇಳಿದ ಅವರು, ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು. ಇದೇ ವೇಳೆ ಸಚಿವ ಎಂ.ಬಿ. ಪಾಟೀಲ ಅವರನ್ನು ಸರ್ವನಾಶ ಮಾಡುವುದಾಗಿ ಜೀವಬೆದರಿಕೆ ಹಾಕಿರುವುದು ಖಂಡನೀಯ. ಧರ್ಮದ ಮೇಲೆ ನಂಬಿಕೆ ಇರುವವರಾರೂ ಇಂತಹ ಕೆಲಸ ಮಾಡುವುದಿಲ್ಲ ಎಂದು ಸಚಿವ ಖಂಡ್ರೆ ತಿಳಿಸಿದರು.