Advertisement

ನಾನು ಈಶ್ವರಪ್ಪ ಅಣ್ಣ ತಮ್ಮ! ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಗುರಿ 

11:20 AM Feb 10, 2017 | Team Udayavani |

ಬಾಗಲಕೋಟೆ: ‘ನಾನು ಮತ್ತು ಈಶ್ವರಪ್ಪ ಅಣ್ಣ ತಮ್ಮಂದಿರಿದ್ದಂತೆ ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ’  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನನ್ನ ಮತ್ತು ಈಶ್ವರಪ್ಪ ನಡುವೆ ಈಗ ಯಾವುದೇ ಗೊಂದಲ ಇಲ್ಲ. ಇಬ್ಬರೂ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇವೆ. ಇನ್ನು ಯಾರೂ ನಮ್ಮ ನಡುವೆ ಅನಗತ್ಯ ಗೊಂದಲ ನಿರ್ಮಿಸಬೇಡಿ’  ಎಂದು ಮನವಿ ಮಾಡಿದರು. 

ಮಾಜಿ ಸಚಿವ ಅಂಬರೀಷ್‌ ಅವರು ಬಿಜೆಪಿ ಸೇರ್ಪಡೆಯಾಗುತ್ತಾರ ಎಂದು ಕೇಳಿದ್ದಕ್ಕೆ ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದರು. 

‘ಎಸ್‌.ಎಂ.ಕೃಷ್ಣ ಅವರು ಪಕ್ಷ ಸೇರ್ಪಡೆಯಾಗುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಇದೇ ವೇಳೆ ‘ಯಾವುದೇ ಪಕ್ಷವಾಗಲಿ ಶಾಸಕರು ಕಲಾಪಕ್ಕೆ ಹಾಜರಾಗಬೇಕು. ಕಲಾಪಕ್ಕೆ ಹಾಜರಾಗುವುದು ಶಾಸಕರ ಕರ್ತವ್ಯ.ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುತ್ತಾರೆ. ಕಲಾಪದಲ್ಲಿ ಭಾಗಿಯಾದದಿದ್ದರೆ ಅದು ಜನರಿಗೆ ಮಾಡುವ ಅವಮಾನ’ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next