Advertisement

ಜನಹಿತಕ್ಕಾಗಿ ಒಪ್ಪಿದ್ದೆವು

12:30 AM Mar 13, 2019 | |

ಹೊಸದಿಲ್ಲಿ: ನೋಟು ಅಮಾನ್ಯ ನಿರ್ಧಾರಕ್ಕೆ ಆರ್‌ಬಿಐ ಮಂಡಳಿಯ ಕೆಲವು ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸಿದರೂ, ಇನ್ನು ಕೆಲವರು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಈ ನಿರ್ಧಾರವನ್ನು ಬೆಂಬಲಿಸಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ನೋಟು ಅಮಾನ್ಯವು ಅಲ್ಪಕಾಲಿಕ ಋಣಾತ್ಮಕ ಪರಿಣಾಮ ಬೀರಲಿದೆ ಮತ್ತು ಅದರಿಂದ ಕಪ್ಪುಹಣ ನಿಯಂತ್ರಣ ಸಾಧ್ಯವಿಲ್ಲ ಎಂದು ಅಮಾನ್ಯಕ್ಕೂ ಮುನ್ನ ನಡೆದ ಸಭೆಯಲ್ಲಿ ಮಂಡಳಿ ಎಚ್ಚರಿಸಿತ್ತು ಎಂಬ ವರದಿಗಳ ಬೆನ್ನಲ್ಲೇ ಕೆಲವು ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ. ಕೆಲವರು ಆಕ್ಷೇಪವೆತ್ತಿದರೂ, ಕೊನೆಗೆ ಜನರ ಹಿತದೃಷ್ಟಿಯಿಂದ ಅದನ್ನು ಒಪ್ಪಲಾಯಿತು ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next