Advertisement

ವಯನಾಡ್‌ : ರಾಹುಲ್‌ ಗಾಂಧಿ ವಿರುದ್ಧ ತುಷಾರ್‌ ವೆಲ್ಲಪಳ್ಳಿ ಎನ್‌ಡಿಎ ಅಭ್ಯರ್ಥಿ

09:25 AM Apr 02, 2019 | Team Udayavani |

ಹೊಸದಿಲ್ಲಿ : ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ದ NDA ಅಭ್ಯರ್ಥಿಯಾಗಿ ಭಾರತ ಧರ್ಮ ಜನ ಸೇವಾ ಅಧ್ಯಕ್ಷ ತುಷಾರ್‌ ವೆಲ್ಲಪಳ್ಳಿ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

ಇದೇ ವೇಳೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ನಾಮಪತ್ರ ಸಲ್ಲಿಸಿದರು.

ಈ ನಡುವೆ ತೆಲಂಗಾಣದ ಝಹೀರಾಬಾದ್‌ ನಲ್ಲಿ ಸಾರ್ವಜನಿಕ ಭಾಷಣ ಮಾಡುತ್ತಾ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು “ನಿಮ್ಮ ಸಿಎಂ ಎಂದಾದರೂ ರಫೇಲ್‌ ವಿಷಯವನ್ನು ಎತ್ತಿದ್ದುಂಟಾ ? ಅವರು ಎಂದಾದರೂ ಚೌಕೀದಾರ್‌ ಚೋರ್‌ ಹೈ ಅಂದದ್ದುಂಟಾ ? ನಿಜಕ್ಕಾದರೆ ಟಿಆರ್‌ಎಸ್‌ ಮತ್ತು ಅದರ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರವಾಗುತ್ತಿದ್ದಾರೆ. ಮೋದಿ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪಕ್ಷ ಮಾತ್ರ ಹೋರಾಡುತ್ತಿದೆ, ಟಿಆರ್‌ಎಸ್‌ ಅಲ್ಲ; ಇದು ಇಡಿಯ ದೇಶಕ್ಕೇ ತಿಳಿದಿರುವ ವಿಚಾರವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next