Advertisement

ನೀರಿಗೆ ದಾರಿ: ಮುಂದುವರಿದ ಶ್ರಮದಾನ

12:50 AM May 12, 2019 | Sriram |

ಉಡುಪಿ: ಬಜೆ ಅಣೆಕಟ್ಟೆಗೆ ನೀರು ಹರಿಯಲು ತಡೆಯಾಗಿರುವ ಕಲ್ಲು, ಹೂಳನ್ನು ಶ್ರಮದಾನದ ಮೂಲಕ ತೆರವುಗೊಳಿಸುವ ಕೆಲಸ ಶನಿವಾರವೂ ನಡೆಯಿತು.

Advertisement

ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವ ದಲ್ಲಿ ಮೇ 9ರಂದು ಆರಂಭಗೊಂಡಿರುವ ಶ್ರಮದಾನ ಶನಿವಾರ 3ನೇ ದಿನ ಪೂರೈಸಿತು. ಶಾಸಕರೇ ಸ್ವತಃ ಹಾರೆಯನ್ನು ಹಿಡಿದು ಶ್ರಮದಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕರು, ನಗರಸಭಾ ಸದಸ್ಯರು, ಪಕ್ಷದ ಕಾರ್ಯಕರ್ತರು ಕೂಡ ಕೈ ಜೋಡಿಸಿದ್ದು ನೀರು ಹರಿಸಲು ‘ಭಗೀರಥ’ ಪ್ರಯತ್ನ ಮುಂದುವರಿಸಿದ್ದಾರೆ.

2 ಕಿ.ಮೀ. ದೂರಕ್ಕೆ
ಕಲ್ಲುಗಳನ್ನು ಒಡೆಯಲು ಹಿಟಾಚಿ/ಕಂಪ್ರಸರ್‌ ಬಳಸಲಾಗುತ್ತಿದೆ. ಒಡೆದ ಸಣ್ಣ ಸಣ್ಣ ಬಂಡೆಕಲ್ಲುಗಳನ್ನು ಶ್ರಮದಾನದ ಮೂಲಕ ಬದಿಗೆ ಸರಿಸಲಾಗುತ್ತಿದೆ. ಶ್ರಮದಾನ ಬಜೆ ಡ್ಯಾಂನಿಂದ ಸುಮಾರು 2 ಕಿ.ಮೀ. ದೂರಕ್ಕೆ ಸಾಗಿದೆ. ಶನಿವಾರ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡರು.’ರವಿವಾರ ಕೂಡ ಶ್ರಮದಾನ ಮುಂದುವರಿಯಲಿದೆ’ ಎಂದು ಶಾಸಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next