Advertisement

ಮೂಲೆಗುಂಪಾಯಿತೇಕೆ ನೀರುಣಿಸುವ ಜಲನಿಧಿ ಯೋಜನೆ?

09:04 AM May 22, 2019 | sudhir |

ಬದಿಯಡ್ಕ: ಮಳೆಯ ಸುಳಿವಿಲ್ಲದಾಗ ವರ್ಷಗಳ ಹಿಂದೆ ಆರಂಭಿಸಿದ ಯೋಜನೆಗಳು ಸಕಾಲದಲ್ಲಿ ಪೂರ್ತಿಯಾಗಿರುತ್ತಿದ್ದಲ್ಲಿ ಅದೇ ಒಂದು ಆಶ್ವಾಸನೆಯಾಗುತ್ತಿತ್ತು. ಆದರೆ ಯಾಕಾಗಿಯೋ ಈ ಯೋಜನೆಗಳು ಎಲ್ಲಿಯೂ ತಲುಪದೆ ಹಾಗೇ ಉಳಿದಿವೆ. ಮತಯಾಚನೆಗಾಗಿ ಮನೆಮನೆಗಳಲ್ಲೂ ಭರವಸೆಯ ಹೊಸ್ತಿಲು ತುಳಿದವರು ಇಂದು ನಿರಾಸೆಯ ಕೂಪಕ್ಕೆ. ಮತ ಎಣಿಕೆಗೆ ದಿನ ಬಾಕಿಯಿದ್ದಂತೇ ಪಕ್ಷದ ನಾಯಕರಾಗಲೀ ಜನಪ್ರತಿನಿಧಿಗಳಾಗಲೀ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಸುಮ್ಮಗಾಗಿದ್ದಾರೆ. ಕಾಮಗಾರಿ ಪೂರ್ತಿಗೊಂಡ ಜಲನಿಧಿ ಯೋಜನೆಗಳು ಬಿಕೋ ಎನ್ನುತ್ತಿವೆ. ಪದೇ ಪದೇ ನಡೆಯುತ್ತಿರುವ ಉದ್ಯೋಗಸ್ಥರ ಸ್ಥಳಾಂತರ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಲಾವಕಾಶ ತೆಗೆದುಕೊಳ್ಳುವುದು, ಅಧಿಕಾರಿಗಳ ಅವಗಣನೆ ಮುಂತಾದವುಗಳು ಯೋಜನೆಗಳು ಅರ್ಧದಲ್ಲೇ ಮೊಟಕುಗೊಳ್ಳಲು ಮುಖ್ಯ ಕಾರಣಗಳಾಗಿವೆ.

Advertisement

ಗ್ರಾಮೀಣ ಯೋಜನೆ- ವಿಳಂಬ
ಚೆಂಗಳ, ಮಧೂರು, ಮುಳಿಯಾರ್‌, ಮೊಗ್ರಾಲ್‌ ಪುತ್ತೂರು ಪಂಚಾಯತ್‌ಗಳಿಗಿಗಾಗಿ ನೀರು ವಿತರಿಸಲು ದೇಶೀಯ ಗ್ರಾಮೀಣ ಯೋಜನೆ ಕಾಮಗಾರಿ ಪ್ರಾರಂಭಿಸಿ 6 ವರ್ಷಗಳೇ ಕಳೆಯಿತು. ಈವರೆಗೂ ನೀರು ವಿತರಿಸಲಾಗಲಿಲ್ಲ. ಪೂರ್ಣವಾಗಿ ಕಾಮಗಾರಿ ಪೂರ್ತಿಗೊಂಡರೂ ನಿಶ್ಚಿತ ಸಮಯದಲ್ಲಿ ಕಾಮಗಾರಿ ತೊಡಗದೇ ಇರುವುದರಿಂದ ಜಲಶುದ್ದಿಕರಣ ಘಟಕ ನಾಶವಾದುದು ಯೋಜನೆಗೆ ದೊಡ್ಡ ಹೊಡೆತ ಬಿದ್ದಂತಾಯಿತು. 2013 ರಲ್ಲಿ ಕಾಮಗಾರಿ ಪ್ರಾರಂಭಿಸಿ 2015 ರಲ್ಲಿ ಪೂರ್ತಿಗೊಳಿಸಬೇಕೆಂದು ಕರಾರಿನಲ್ಲಿ ತಿಳಿಸಲಾಗಿತ್ತು. ಪ್ಲಾಂಟೇಷನ್‌ ಕೋರ್ಪರೇಶನ್‌ನಿಂದ ಸ್ಥಳ ಖರೀದಿಸಲು ವಿಳಂಬವಾದುದು ಒಂದು ಕಾರಣವಾದರೆ ಕರಾರು ಸ್ವೀಕರಿಸಿದ ವ್ಯಕ್ತಿ ಹೆಚ್ಚಿನ ಮೊತ್ತ ಪಡೆದು ಕಾಮಗಾರಿಯನ್ನು ಅರ್ಧಕ್ಕೆ ಉಪೇಕ್ಷಿಸಿದುದರಿಂದ ನಬಾರ್ಡಿನ ಸಹಾಯವು ಸಿಗದಂತಾಯಿತು. ನುಸ್ರತ್‌ ನಗರದಲ್ಲಿ ನಿರ್ಮಿಸುವ 55 ದಶಲಕ್ಷ ಲೀಟರ್‌ ನೀರನ್ನು ಹಿಡಿದಿಡಲು ಸಾಧ್ಯವಿರುವ ಜಲಶುದ್ದೀಕರಣ ಘಟಕದ ಕಾಮಗಾರಿ ಪೂರ್ತಿಯಾದರೆ ನೀರು ವಿತರಿಸಲು ಸಾಧ್ಯ. 10 ತಿಂಗಳಿಗೆ ಈ ಕರಾರನ್ನು ಮುಂದೂಡಲಾಗಿದೆ.

ಚಟ್ಟಂಚಾಲ್‌:- ಯೋಜನೆಗೆ ಸ್ಥಳವೆಲ್ಲಿ
ಜಲನಿಧಿ ಯೋಜನೆಗೆ ಸ್ಥಳ ಇದುವರೆಗೂ ಲಭಿಸದ ಚೆಮ್ಮನ್ನಾಡ್‌ ಪಂಚಾಯತಿನ ಶುದ್ದಜಲ ಯೋಜನೆಯ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಇದರ ಜೊತೆಗೆ ಕಾಸರಗೋಡಿನ ನಗರಸಭೆಯ ಕಾಮಗಾರಿ ಭರದಿಂದ ಸಾಗುತ್ತಿರುವಾಗ ಚೆಮ್ಮನ್ನಾಡ್‌ ಪಂಚಾಯತ್‌ನಲ್ಲಿ ಮಾತ್ರ ಯೋಜನೆಗೆ ಸ್ಥಳ ಸಿಗದೇ ಇರುವುದು ವಿಪರ್ಯಾಸ. 26 ಲಕ್ಷ ಲೀಟರ್‌ನ, 17 ಲಕ್ಷ ಲೀಟರ್‌ನ ಎರಡು ಟ್ಯಾಂಕುಗಳನ್ನು ಚೆಮ್ಮನ್ನಾಡಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಮೊದಲ ಟಾಂಕಿ ದೇಳಿಯಲ್ಲಿಯೂ, ಎರಡನೆಯ ಟಾಂಕಿ ಚಟ್ಟಂಚಾಲ್‌ನಲ್ಲಿಯೂ ಸ್ಥಳ ನಿಗದಿಪಡಿಸಲಾಗಿದೆ. ಆದರೂ ಅಧಿಕಾರಿಗಳಿಂದ ಅನುಮತಿ ಲಭಿಸಿಲ್ಲ. ದೇಳಿಯಲ್ಲಿ ಸರಕಾರ ಸ್ಥಳವನ್ನು ಯೋಜನೆಗಾಗಿ ಮೀಸಲಿಡಲಾಗಿದೆ. ಇಲ್ಲಿಯ ಭೂ ಸಂಬಂಧಿ ದಾಖಲೆ ಪತ್ರಗಳಿಗಾಗಿ ಜಲ ಅಥೋರಿಟಿ ಕಾಯುತ್ತಿದೆ. ಇದರ ಕರಾರಿನ ಕಾಲಾವಧಿಯು ಕಳೆದ ಮಾರ್ಚಿನಲ್ಲಿ ಕೊನೆಗೊಂಡಿದೆ. ಪುನಃ 10 ತಿಂಗಳಿಗಾಗಿ ಕರಾರನ್ನು ಮುಂದೂಡಲಾಗಿದೆ ಹಾಗೂ ಇನ್ನೂ ಪೂರ್ತಿಗೊಳಿಸಲಾಗದಿದ್ದಲ್ಲಿ ಚೆಮ್ಮನ್ನಾಡನ್ನು ಬಿಟ್ಟು ಉಳಿದಲ್ಲಿಗೆ ನೀರು ವಿತರಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದೇ ಯೋಜನೆಯಲ್ಲಿ ವಿದ್ಯಾನಗರದಲ್ಲೂ ಪುಲಿಕುನ್ನುವಿನಲ್ಲೂ ನಿರ್ಮಿಸುತ್ತಿರುವ ಟ್ಯಾಂಕುಗಳ ಕಾಮಗಾರಿ ಶೇ. ಅರ್ಧದಷ್ಟು ಪೂರ್ತಿಗೊಂಡಿದೆ. ನಗರ ಸಭೆ ಹಾಗೂ ಚೆಮ್ಮನ್ನಾಡ್‌ ಪಂಚಾಯತ್‌ಗಳಲ್ಲೂ ನೀರಿನ ûಾಮ ಬಗೆಹರಿಸಲು ಕಿಫ್‌ºನಲ್ಲಿ (ಕೇರಳ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ ಬೋರ್ಡ್‌) 76 ಕೋಟಿ ರೂ.ಯ ಅನುಮತಿ ಲಭಿಸಿದೆ.

ಬರಿದಾದ ಜಲನಿಧಿ ಯೋಜನೆ
2015 ರಲ್ಲಿ ಪ್ರಾರಂಭಿಸಿದ ಜಲ ನಿಧಿ ಯೋಜನೆಯ ಕಾಮಗಾರಿಯೂ ಆಮೆ ನಡಿಗೆಯಂತೆ ಸಾಗಿ 2019 ರಲ್ಲಿ ಪೂರ್ತಿಗೊಂಡಿತು. ಆದರೆ ನದಿ, ತೋಡುಗಳು ಬತ್ತಿ ಹೋದ ಕಾರಣ ವಿತರಿಸಲು ನೀರಿಲ್ಲದಾಯಿತು. ಯೋಜನೆ ವಿಜಯಕರವಾಗಿದ್ದರೂ ನೀರು ವಿತರಣೆಗೆ ಮಳೆರಾಯನೇ ಕರುಣಿಸಬೇಕು.

2014 ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಒಂದು ವರ್ಷದಲ್ಲಿ ಪೂರ್ತಿಗೊಳಿಸಲು ನಿರ್ಣಯಿಸಲಾಗಿತ್ತು. ಆದರೆ ಟೆಂಡರ್‌ ಕೋರಿದ್ದು ಮಾತ್ರ 2015 ರಲ್ಲಿ. ಮೊದಲು ಟೆಂಡರ್‌ ಸ್ವೀಕರಿಸಿದ ವ್ಯಕ್ತಿ ಅರ್ಧದಲ್ಲೇ ಕೆಲಸ ನಿಲ್ಲಿಸಿದ ಕಾರಣ ಕಾಮಗಾರಿ ಮೊಟಕುಗೊಂಡಿತು. ರೀಟೆಂಡರ್‌ ನೀಡಲು ಒಂದು ವರ್ಷವೇ ಬೇಕಾಗಿ ಬಂತು. ಯೋಜನೆ ಪೂರ್ತಿಗೊಂಡಾಗ ನೀರಿನ ಮೂಲವಾದ ಕುಂಟಾರಿನ ಪಯಶ್ವಿ‌ನಿ ನದಿಯೂ ಬತ್ತಿ ಹೋಯಿತು. ಇಲ್ಲಿಯೂ ಚೆಕ್‌ಡಾಮಿನ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. 75% ಸರಕಾರದ ಮೊತ್ತ, 15% ಪಂಚಾಯತಿನ ಮೊತ್ತ, 10% ಮೊತ್ತ ಸೇರಿಸಿ 7.37 ಕೋಟಿ ರೂ. ಇದಕ್ಕಾಗಿ ವ್ಯಯಿಸಲಾಗಿದೆ.

Advertisement

ಅಡೂರು: ಬಗೆ ಹರಿಯದ ಸಮಸ್ಯೆ
ಸಮಸ್ಯೆಗಳು ಒಂದರ ಹಿಂದೆ ಒಂದಾಗಿ ಬರುತ್ತಿರುವಾಗಲೂ ಅಡೂರಿನಲ್ಲಿ ನೀರಿಗಾಗಿ ಊರವರು ನಿರೀಕ್ಷಿಸುತ್ತಿದ್ದಾರೆ. 5 ಚರ್ಷಗಳಿಂದೀಚೆಗೆ ಇಲ್ಲಿನ ಸಾರ್ವಜನಿಕರು ನೀರಿನ ಬರವಿಗಾಗಿ ಕಾಯುತ್ತಿದ್ದಾರೆ. ಅಡೆತಡೆಗಳನ್ನು ದಾಟಿ ಕಾಮಗಾರಿ ಪೂರ್ತಿಗೊಳಿಸಿದಾಗ ನದಿನೀರು ಕೈಕೊಟ್ಟಿತು. ಅಡೂರಿನ ಪೇಟೆ ಹಾಗೂ ಸುತ್ತುಮುತ್ತಲ ಪರಿಸರದಲ್ಲಿ ನೀರು ಸಿಗದೇ 300 ಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿವೆ. 2014 ರಲ್ಲಿ ಜಲನಿಧಿ ಯೋಜನೆ ಕಾಮಗಾರಿ ಪ್ರಾರಂಭಿಸಿದೆ. ಪಯಶ್ವಿ‌ನಿ ನದಿಯಲ್ಲಿ ಬಾವಿ ತೋಡಿ ಅದರಿಂದ ನೀರು ತೆಗೆಯಲು ತೀರ್ಮಾನಿಸಲಾಗಿತ್ತು. ಮೊದಲ ಮಳೆಗೆ ಬಾವಿಯು ಸಂಪೂರ್ಣ ನಾಶವಾಯಿತು. ಪುನಃ ಬಾವಿಯ ಕೆಸರು ತೆಗೆಯುವಲ್ಲಿ ನಿರತರಾದಾಗ ತಲಭಾಗದಲ್ಲಿ ಕೋರೆಕಲ್ಲು ಪ್ರತ್ಯಕ್ಷಗೊಂಡಿತು. ಈ ಕಾರಣದಿಂದ ಬಾವಿಯನ್ನು ಉಪೇಕ್ಷಿಸಬೇಕಾಯಿತು. ನಂತರ ಹೊಸತೊಂದು ಬಾವಿ ತೋಡಿದರು. ಶಕ್ತಿಯುತವಾದ ಮೋಟರ್‌ ಉಪಯೋಗಿಸಲು ಅಲ್ಲಿ ವಿದ್ಯುತ್‌ನ ಕೊರತೆ ಕಂಡು ಬಂತು. ಆದ ಕಾರಣ ಹೊಸ ಟ್ರಾನ್ಸ್‌ಫಾರ್ಮರ್‌ ನಿರ್ಮಿಸಲಾಯಿತು. ಅಷ್ಟಾಗುವಾಗ 2 ವರ್ಷ ಮೊದಲು ಹಾಕಿದ ಪೈಪ್‌ಗ್ಳು ಒಡೆಯಲು ಪ್ರಾರಂಭಿಸಿತು. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿಗೆ ಮಳೆಗಾಲದ ಆಗಮನವಾಯಿತು. ಈ ಮಳೆಗೆ ಮೋಟರ್‌ ಸಂಪೂರ್ಣವಾಗಿ ನೀರಿನಡಿಯಲ್ಲಿ ಮುಳುಗಿತು. ಫಲಾನುಭವಿಗಳು ನೀಡಬೇಕಾದ ಹಣ ಸಿಗದಾಗ ಜಲನಿಧಿ ಯೋಜನೆಯ ಹಣವು ಸಿಗದಂತಾಯಿತು. ಕೊನೆಗೂ ನಿರ್ಮಾಣ ಪೂರ್ತಿಗೊಂಡರೂ ಮಳೆ ಬರದೇ ಬಾವಿಯಲ್ಲಿ ನೀರು ಸಿಗಲಿಕ್ಕಿಲ್ಲ. ಬರುವ ವರ್ಷದಲ್ಲಿ ಯೋಜನೆ ಕಾರ್ಯಪ್ರವೃತ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳುತಿ ¤ದ್ದಾರೆ. ಹೇಳಿಕೆ ಸಾಕಾರವಾಗುವದೇ ಅಥವಾ ಮಳೆಯಲ್ಲಿ ಕೊಚ್ಚಿಹೋಗುವುದೇ ನೋಡಬೇಕು.

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next