Advertisement

ಮಾಶಾಳದಿಂದ ಜಲಶಕ್ತಿ ಅಭಿಯಾನ

06:21 PM Apr 10, 2021 | Team Udayavani |

ಅಫಜಲಪುರ: ರೈತರು ಹಾಗೂ ಜನಸಾಮಾನ್ಯರು ಸ್ವಾವಲಂಬಿ ಜೀವನಕ್ಕೆ ತಾಲೂಕಿನಾದ್ಯಂತ ಹೆಚ್ಚು ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದ್ದು,
ತಾಲೂಕಿನಲ್ಲಿ 58 ಕೋಟಿ ರೂ. ವೆಚ್ಚದಲ್ಲಿ ಏಳು ಕೆರೆಗಳನ್ನು ತುಂಬುವ ಮೂಲಕ ರೈತರ ಬಹುದಿನದ ಬೇಡಿಕೆ ಇಡೆರಿಸಿದಂತಾಗಿದೆ ಎಂದು ಶಾಸಕ ಎಂ.ವೈ.
ಪಾಟೀಲ ಹೇಳಿದರು. ತಾಲೂಕಿನ ಮಾಶಾಳ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಡಿಯಲ್ಲಿ 58 ಕೋಟಿ ರೂ. ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಕೃಷಿ ದೇಶದ ಬಹುಮುಖ್ಯ ಕಸಬಾಗಿದ್ದು ಕೃಷಿ ಚಟುವಟಿಕೆಗಳು ಬಲವರ್ಧನೆಗೊಳ್ಳಲು ನೀರಾವರಿ ಯೋಜನೆ ಯಶಸ್ವಿಯಾಗಬೇಕು. ಇನ್ನು ಕೃಷಿಯತ್ತ
ಯುವಕರು ಸೇರಿದಂತೆ ವಿದ್ಯಾವಂತರು ಒಲವು ತೋರಿಸಿದರೆ ಕೃಷಿ ಮತ್ತಷ್ಟು ಲಾಭದತ್ತ ಹೆಜ್ಜೆ ಹಾಕಲು ಸಾಧ್ಯ ಎಂದರು.

ಕೆರೆ ತುಂಬುವ ಯೋಜನೆಯಿಂದ ತಾಲೂಕಿನಾದ್ಯಂತ ಅಂತರ್ಜಲಮಟ್ಟ ಹೆಚ್ಚಳವಾಗಲಿದೆ. ನೀರಾವರಿ ಲಾಭ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಶಾಲೆ, ಆಸ್ಪತ್ರೆ, ಶೌಚಾಲಯ, ರಸ್ತೆ, ಚರಂಡಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ನೀಡಲಾಗಿದ್ದು ತಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸ ಚುರುಕಾಗಿ ನಡೆಯುತ್ತಿವೆ. ಮಾಶಾಳ ಗ್ರಾಮದಲ್ಲಿ ನರೇಗಾ ಯೋಜನೆ ಯಶಸ್ವಿಯಾಗಿದ್ದು, ಸರ್ಕಾರದ ಅನುದಾನದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಮಣೂರು ಮತ್ತು ಮಾಶಾಳ ಗ್ರಾ.ಪಂ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜಗೇರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಜಿಪಂ ಸದಸ್ಯ ಅರುಣಕುಮಾರ ಪಾಟೀಲ ಮಾತನಾಡಿ, ತಮ್ಮ ತಂದೆ ಶಾಸಕರಾಗಿ ಆಯ್ಕೆಯಾದ ಬಳಿಕ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಬಹುದಿನದ ಕನಸು ಈಡೇರಿದಂತಾಗಿದೆ ಎಂದರು. ಮುಖಂಡ ಜೆ.ಎಂ. ಕೊರಬು ಅನುಭವ ಉಳ್ಳವರು. ಅಭಿವೃದ್ಧಿ ಕುರಿತು ಅವರ ಸಲಹೆ, ಮಾರ್ಗದರ್ಶನ ಅವಶ್ಯಕವಾಗಿದೆ. ನನ್ನನ್ನು ರಾಜಕೀಯವಾಗಿ ಬೆಳೆಸಿದ ಮಾಶಾಳ ವಲಯದ ಜನತೆ ಋಣ ಮರೆಯುವದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ರಾಜೇಂದ್ರ ಪಾಟೀಲ ರೇವೂರ ಮಾತನಾಡಿದ ಅವರು, ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಮರೆತು ಉದ್ದೀಮೆದಾರರ ಕೈಗೊಂಬೆಯಾಗಿ ವರ್ತಿಸುತ್ತಿವೆ. ಜನ ತಕ್ಕ ಪಾಠ ಕಲಿಸಲು ಸಜ್ಜಾಗಬೇಕಿದೆ. ಈಗ ಕೆರೆ ತುಂಬುವ ಯೋಜನೆ ಕೈಗೊಂಡಿದ್ದು ಖುಷಿ ತಂದಿದೆ. ರೇವೂರ ಗ್ರಾಮದಲ್ಲಿಯೂ ಈ ಯೋಜನೆ ಕೈಗೊಳ್ಳಿ ಎಂದು ಮನವಿ ಮಾಡಿದರು. ಜ್ಞಾನೇಶ್ವರಿ ಪಾಟೀಲ, ಗುರುಪಾದ ಪತಾಟೆ, ತುಕಾರಾಮಗೌಡ ಪಾಟೀಲ ಮಾತನಾಡಿದರು.

Advertisement

ಕೆಎನ್‌ಎಲ್‌ಎಲ್‌ ಇಇ ಮಲ್ಲಿಕಾರ್ಜುನ ಜಾಕಾ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಕಾಂಗ್ರೆಸ್‌ ಮುಖಂಡ ಜೆ.ಎಂ.ಕೊರಬು ಮಾತನಾಡಿ, ನಾನು ಯಾವತ್ತಿಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಸೇವೆ ಮಾಡುತ್ತೇನೆ. ಶಾಸಕ ಎಂ.ವೈ. ಪಾಟೀಲ ಜನಪರ ಕೆಲಸಗಳಿಗೆ ಸದಾ ಬೆಂಬಲ ಇದೆ ಎಂದರು.

ಗ್ರಾ ಪಂ ಅಧ್ಯಕ್ಷ ಸುಗಲಾಬಾಯಿ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಸದಸ್ಯ ರಾಜಕುಮಾರ ಬಬಲಾದ, ಜಿಪಂ ಸದಸ್ಯೆ ಬೌರಮ್ಮ ಕರೂಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಾಂತೆಶ ಪಾಟೀಲ, ಮುಖಂಡರಾದ ಪಪ್ಪು ಪಟೇಲ್‌, ರಮೇಶ ಪೂಜಾರಿ ಉಡಚಾಣ ಮಹಾದೇವಗೌಡ ಕರೂಟಿ, ಬಾಬಾಸಾಹೇಬಗೌಡ ಪಾಟೀಲ, ಶಿವಪುತ್ರಪ್ಪ ಜಿಡ್ಡಗಿ, ಸಿದ್ದಾರ್ಥ ಬಸರಿಗಿಡ, ರಾಜಶೇಖರ ಪಾಟೀಲ, ಸಂತೋಷ ರಾಠೊಡ, ಶಿವಾನಂದ ಗಾಡಿಸಾಹುಕಾರ, ಬಿಲ್ಲಮರಾಜ್‌ ಮ್ಯಾಳೆಸಿ, ಶಿವರುದ್ರಪ್ಪ ಅವಟಗಿ, ರೇವಪ್ಪ ನಾಮಗೊಂಡ, ಚಂದು ದೇಸಾಯಿ, ವಿಠೊಬ ಪೂಜಾರಿ, ನಾನಾ ಸಾಹೇಬಗೌಡ ಪಾಟೀಲ, ಶರಣು ಕುಂಬಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next