Advertisement

ಕೊಳವೆಯಲ್ಲಿ ನೀರು ಸೋರಿಕೆ: ಇಂದು ನೀರು ಸರಬರಾಜಿನಲ್ಲಿ ವ್ಯತ್ಯಯ

09:27 PM Feb 18, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್‌-1ರ 18 ಎಂಜಿಡಿ ರೇಚಕ ಸ್ಥಾವರದಿಂದ ಬೆಂದೂರು, ಪಣಂಬೂರು ಕಡೆಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಕಣ್ಣೂರಿನ ಬಳಿ ನೀರು ಸೋರಿಕೆ ಉಂಟಾಗಿದೆ.

Advertisement

ಇದನ್ನು ದುರಸ್ತಿಗೊಳಿಸುವ ಕಾರ್ಯವನ್ನು ಫೆ. 19ರಂದು ಬೆಳಗ್ಗೆ 9 ಗಂಟೆಯಿಂದ ಫೆ.20ರ ಬೆಳಗ್ಗೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಆದುದರಿಂದ ಈ ಅವಧಿಯಲ್ಲಿ ಸುರತ್ಕಲ್‌, ಪಣಂಬೂರು, ಕಾನಾ, ಬಾಳ, ಕುಳೂರು, ಭಾಗಶಃ ಬೆಂದೂರು, ಭಾಗಶಃ ಕಾರ್‌ಸ್ಟ್ರೀಟ್‌, ಕೋಡಿಕಲ್‌, ಆಕಾಶಭವನ ಪ್ರದೇಶಗಳಲ್ಲಿ ನೀರು ವಿತರಣೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next