Advertisement

ಯಶೋ ಮಾರ್ಗಕ್ಕೆ ಸಿಕ್ಕಿತು ಪ್ರತಿಫಲ; “ಬರ”ದ ನಾಡಿನ ಕೆರೆಯಲ್ಲಿ ಜೀವಜಲ

01:41 PM Mar 28, 2017 | Sharanya Alva |

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದರೆ, ಮತ್ತೊಂದೆಡೆ ಕುಡಿಯುವ ನೀರಿಗೂ ತತ್ವಾರ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬತ್ತಿಹೋದ ಕೆರೆಯ ಹೂಳೆತ್ತಲು ಚಾಲನೆ ನೀಡಿದ್ದ ಸ್ಯಾಂಡಲ್ ವುಡ್ ನಟ ಯಶ್ ದಂಪತಿ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಹೌದು, ಒಂದು ತಿಂಗಳ ಹಿಂದೆ ಕೆರೆ ಹೂಳೆತ್ತಲು ಚಾಲನೆ ನೀಡಿದ್ದ ಕೆರೆಯಲ್ಲೀಗ ಜೀವಜಲ ಚಿಮ್ಮುತ್ತಿದೆ!

Advertisement

ಕೊಪ್ಪಳದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. ಸುಮಾರು 96 ಎಕರೆಯಲ್ಲಿ ತುಂಬಿರೋ ಹೂಳನ್ನು ಎತ್ತಲು ಬೆಂಗಳೂರಿನ ಯಶೋಮಾರ್ಗ ಫೌಂಡೇಶನ್ ಮುಂದಾಗಿತ್ತು. ಕಳೆದ ಫೆಬ್ರವರಿ 28 ರಂದು ಯಶ್ ದಂಪತಿ ಕೆರೆಯಲ್ಲಿ ಹೂಳು ಎತ್ತಲು ಭೂಮಿ ಪೂಜೆ ಮಾಡಿದ್ದರು. ಯಶೋಮಾರ್ಗ ಫೌಂಡೇಶನ್ 4 ಕೋಟಿ ವೆಚ್ಚದಲ್ಲಿ ಕೆರೆಯಲ್ಲಿರೋ ಹೂಳು ಎತ್ತಿ ಮಾದರಿ ಕೆರೆಯನ್ನಾಗಿಸಲು ಸಂಕಲ್ಪ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next