Advertisement

15-20 ದಿನಕ್ಕೆ ಬೇಕಷ್ಟು ನೀರು: ಜಯಮಾಲಾ

07:46 AM May 11, 2019 | mahesh |

ಉಡುಪಿ: ಬಜೆ ಅಣೆಕಟ್ಟು ಸಮೀಪ ಡ್ರೆಜ್ಜಿಂಗ್‌ ನಡೆಸಿ ನೀರು ಹರಿಸುವ ಕೆಲಸ ಮುಂದುವರಿದಿದ್ದು ಮುಂದಿನ 15-20 ದಿನಗಳಿಗೆ ಬೇಕಷ್ಟು ನೀರು ಸಿಗಲಿದೆ ಎಂದು ಸಚಿವೆ ಡಾ| ಜಯಮಾಲಾ ತಿಳಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಶುಕ್ರವಾರ ಡಿಸಿ ಕಚೇರಿಯಲ್ಲಿ ಸಭೆ ನಡೆಸಿ ಡ್ರೆಜ್ಜಿಂಗ್‌ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ ಅನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

ಹಣಕಾಸಿನ ತೊಂದರೆ ಇಲ್ಲ
ಜಿಲ್ಲೆಯ 84 ಗ್ರಾ.ಪಂ.ಗಳ 126 ಗ್ರಾಮಗಳಿಗೆ 141 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡ ಲಾಗುತ್ತಿದೆ. ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಭಾಗಶಃ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ನೀರು ಪೂರೈಕೆಗೆ ಹಣಕಾಸಿನ ತೊಂದರೆ ಇಲ್ಲ. ತುರ್ತು ಕಾಮಗಾರಿಗಳಿಗಾಗಿ ಒಟ್ಟು 39 ಕೋ.ರೂ. ಇದೆ. ಟ್ಯಾಂಕರ್‌ಮೂಲಕ ನೀರು ಪೂರೈಕೆಗೂ ಇದನ್ನು ಬಳಸಬಹುದಾಗಿದೆ. ನೀರು ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿ ಹಾರ ರೂಪಿಸಲು ಕ್ರಮ ಕೈಗೊಳ್ಳ ಲಾಗುವುದು. ಜಲಮರು ಪೂರಣ, ಮಳೆಕೊೖಲು ಅನುಷ್ಠಾನಿಸುವ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲೆಯ 400 ಮದಗ, ತೋಡುಗಳ ಹೂಳೆತ್ತಲು ನಿರ್ಧರಿಸಲಾಗಿದೆ. ಖಾಸಗಿ ಬಾವಿ, ಬೋರ್‌ವೆಲ್ಗಳನ್ನೂ ಬಳಸಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ. ಚುನಾವಣೆಗೆ ಮೊದಲೇ ನೀರು ಸಮಸ್ಯೆ ಕುರಿತು ಸಭೆ ನಡೆಸಿ ಸೂಚನೆ ನೀಡಿದ್ದೆ. ನರೇಗಾ ಮೂಲಕವೂ ಹೂಳೆತ್ತಲು ಅವಕಾಶವಿದೆ. ಜಿಲ್ಲಾಧಿಕಾರಿ ಮತ್ತು ಸೇರಿದಂತೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಡಾ| ಜಯಮಾಲಾ ತಿಳಿಸಿದರು.

ನೀತಿಸಂಹಿತೆ ಅಡ್ಡಿ
ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮೂಳೂರಿನಲ್ಲಿ ಚಿಕಿತ್ಸೆ ಪಡೆಯು ತ್ತಿರುವ ದೇವೇಗೌಡ ಅವರನ್ನು ಭೇಟಿ ಯಾಗಿಲ್ಲ. ಚುನಾವಣ ನೀತಿ ಸಂಹಿತೆ ಇದ್ದು, ಇಂದು ಕುಡಿಯುವ ನೀರಿನ ಸಮಸ್ಯೆ ಮತ್ತು ಮೀನುಗಾರರ ಪರಿಹಾರ ಕುರಿತು ಮಾತನಾಡಲು ಮಾತ್ರ ಆಯೋಗದಿಂದ ಅನುಮತಿ ಸಿಕ್ಕಿದೆ ಎಂದರು.

ಸಿಎಂ ನೋವು ಅವರಿಗೇ ಗೊತ್ತು
ಸಿಎಂ ರೆಸಾರ್ಟ್‌ ಭೇಟಿ ಬಗ್ಗೆ ಆಕ್ಷೇಪ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಆರೋಗ್ಯ ವಿಚಾರ ವೈಯಕ್ತಿಕ. ಅವರ ನೋವು ಅವರಿಗೇ ಗೊತ್ತು. ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೂ ಸುಸ್ತಾಗುವುದಿಲ್ಲವೆ? ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ ಶಾಸಕರು ಸಂಪರ್ಕ ದಲ್ಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಎಲ್ಲರಿಗೂ ಕನಸುಗಳಿರುತ್ತವೆ. ಕನಸು ಕಾಣುವುದು ಬೇಡ ಎಂದು ಹೇಳುವುದಕ್ಕಾಗುವುದಿಲ್ಲ. ಲೋಕ ಸಭಾ ಚುನಾವಣೆ ಫ‌ಲಿತಾಂಶ ಬಂದ ಅನಂತರವೂ ನಾನು ಹೀಗೆಯೇ (ಸಚಿವೆಯಾಗಿ) ಇರುತ್ತೇನೆ ಎಂದು ಹೇಳಿದರು.

Advertisement

ಮೀನುಗಾರರಿಗೆ 10 ಲ.ರೂ. ಪರಿಹಾರ
ಸಮುದ್ರದಲ್ಲಿ ಮುಳುಗಿರುವ ಸುವರ್ಣ ತ್ರಿಭುಜ ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರ ಕುಟುಂಬದವರಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲ.ರೂ. ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲ.ರೂ. ಸೇರಿದಂತೆ ಒಟ್ಟು ತಲಾ 10 ಲ.ರೂ. ಪರಿಹಾರ ನೀಡಲು ರಾಜ್ಯ ಸರಕಾರ ಆದೇಶಿಸಿದೆ. ಕೇಂದ್ರ ಸರಕಾರ ಕೂಡ ಗರಿಷ್ಠ ಪರಿಹಾರ ನೀಡಬೇಕು ಎಂದು ಶಿಫಾರಸು ಕಳುಹಿಸಲಾಗುವುದು ಎಂದು ಡಾ| ಜಯಮಾಲಾ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next