Advertisement

Water Crisis; ಯೋಗಿ, ಸೈನಿ ಮೊರೆಹೋದ ಆಪ್‌: ನೀರು ಬಿಡಿ ಎಂದು ದಿಲ್ಲಿ ಸಚಿವೆ ಪತ್ರ

12:51 AM Jun 03, 2024 | Team Udayavani |

ಹೊಸದಿಲ್ಲಿ:  ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಂಡಿದ್ದು,ನೀರಿಗಾಗಿ ಈಗ ಆಮ್‌ ಆದ್ಮಿ ಪಕ್ಷವು ಉತ್ತರಪ್ರದೇಶ, ಹರಿಯಾಣದ ಮೊರೆ ಹೋಗಿದೆ.

Advertisement

ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹಾಗೂ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರಿಗೆ ಈ ಕುರಿತು ಪತ್ರ ಬರೆದಿರುವ ಆಪ್‌ ಸಚಿವೆ ಆತಿಷಿ ಮಲೇìನಾ ಹೆಚ್ಚುವರಿ ನೀರು ಬಿಡುವಂತೆ ಕೋರಿ ದ್ದಾರೆ. ಮುಂಗಾರು ಆಗಮನದವರೆಗೆ 1 ತಿಂಗಳ ಕಾಲ  ಜನರಿಗೆ ಕುಡಿಯಲು ಶುದ್ಧ ನೀರಿನ ಆವಶ್ಯಕತೆಯಿದೆ. ಅಧಿಕ ಬಿಸಿಲಿನ ತಾಪಮಾನದಿಂದ ದಿಲ್ಲಿ ಜನರಿಗೆ ವಿವಿಧ ಮೂಲಗಳಿಂದ ನೆರವು ಬೇಕಾಗಿದೆ. ಪರಿಸ್ಥಿತಿ ನಿಭಾಯಿಸಲು ದಯವಿಟ್ಟು ಹೆಚ್ಚುವರಿ ನೀರನ್ನು ಯಮುನಾ ನದಿಗೆ ಹರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ನೀರಿಗಾಗಿ ಜನರ ಪರದಾಟ: ದಿನದ ಬಳಕೆಯ ನೀರಿಗಾಗಿ ದಿಲ್ಲಿ ಜನತೆ ಪರಿತಪಿಸುವಂತಾಗಿದೆ. ನೀರಿನ ಟ್ಯಾಂಕರ್‌ ಮೇಲೆ ಜನ ಮುಗಿಬೀಳು ತ್ತಿರುವ ವೀಡಿಯೋಗಳು ವೈರಲ್‌

ಆಗುತ್ತಿವೆ. ದಿಲ್ಲಿ ಸರ‌ಕಾರ ಹರಿಯಾಣ ಸರಕಾರಕ್ಕೆ ನೀರು ಬಿಡಲು ಸೂಚಿಸು ವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next