Advertisement

ಕಾಲುವೆ ದಡ ಕೊಚ್ಚಿ ನೀರು ಪೋಲು: ಕ್ರಮಕ್ಕೆ ಆಗ್ರಹ

02:55 PM Aug 28, 2017 | Team Udayavani |

ಹುಣಸಗಿ: ಸಮೀಪದ ಎಚ್‌ಬಿಸಿ 2ರ ಕಾಲುವೆ ಅಡಿಯಲ್ಲಿನ ವಿತರಣಾ ಕಾಲುವೆ ಡಿ. 2ರ ನೀರು ಪೋಲಾಗುತ್ತಿದ್ದು, ಕಾಲುವೆ ಪಕ್ಕದ ಹೊಲಗಳಿಗೆ ನೀರು ನುಗ್ಗಿ ಕಾಲುವೆ ಬದಿಯ ಸೇವಾ ರಸ್ತೆ ಕೊಚ್ಚಿ ಹೋಗಿದೆ ಎಂದು ರಾಜನಕೋಳೂರ ಗ್ರಾಮದ ಬಿ.ಸಿ. ಪಾಟೀಲ ತಿಳಿಸಿದ್ದಾರೆ. ಒಂದೆಡೆ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದು, ನೀರು ವ್ಯರ್ಥವಾಗುವುದನ್ನು ತಡೆಯುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕಿದೆ ಎಂದರು. ರಾಜನಕೋಳುರ ಗ್ರಾಮದಿಂದ ರಾಜವಾಳ, ಕಡದರಾಳ ಸೇರಿದಂತೆ ಇತರ ಗ್ರಾಮಗಳ ಜಮೀನುಗಳಿಗೆ ನೀರು ಒದಗಿಸುವ ಕಾಲುವೆ ಇದಾಗಿದ್ದು, ಈ ಕಾಲುವೆ ಕೊಡೇಕಲ್ಲ ಉಪವಿಭಾಗದಡಿ ಬರುತ್ತದೆ. ಶೀಘ್ರ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ರಸ್ತೆಯ ಮಾರ್ಗವಾಗಿ ಹೊಲಕ್ಕೆ ತೆರಳುವ ರೈತರು ತೊಂದರೆ ಪಡುವಂತಾಗಿದೆ. ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next