Advertisement

ಮರಳು ಕಟ್ಟದ ನೀರಿಗಿಳಿಯದಂತೆ ಎಚ್ಚರಿಕೆ ಫಲಕ

11:14 PM Apr 19, 2019 | Team Udayavani |

ಸುಳ್ಯ: ನಗರದ ಕುಡಿಯುವ ನೀರಿನ ಪೂರೈಕೆಗಾಗಿ ಕಲ್ಲುಮುಟ್ಲು ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮರಳು ಕಟ್ಟಕ್ಕೆ ಇಳಿಯದಂತೆ ನ.ಪಂ. ಎಚ್ಚರಿಕೆ ಫಲಕ ಅಳವಡಿಸಿದೆ. ಪಯಸ್ವಿನಿ ನದಿ ನೀರಿಲ್ಲದೆ ಬರಡಾ ಗಿದ್ದು, ಇಡೀ ನಗರಕ್ಕೆ ನೀರೊದಗಿಸಲು ಮರಳು ಕಟ್ಟದಲ್ಲಿ ಸಂಗ್ರಹಗೊಂಡಿರುವ ನೀರನ್ನೇ ನಂಬಲಾಗಿದೆ. ಹೀಗಾಗಿ ನೀರು ಮಲೀನಗೊಳಿಸದಂತೆ ನ.ಪಂ. ಮರಳು ಕಟ್ಟ ಸ್ಥಳದಲ್ಲಿ ಫಲಕ ಅಳವಡಿಸಿದೆ.

Advertisement

ನೀರಿಗಿಳಿಯುವ ದುಸ್ಸಾಹಸ
ಫಲಕ ಅಳವಡಿಸಿದ ಮೇಲೂ ಕೆಲವರು ಈಜಾಟಕ್ಕೆಂದು ನೀರಿಗಿಳಿದ ಪ್ರಸಂಗ ನಡೆದಿದೆ. ಪ್ರತಿ ವರ್ಷವೂ ಇಂತಹ ಕೃತ್ಯಗಳು ಪುನಾರವರ್ತನೆ ಆಗುತ್ತಿವೆ. ಕೆಲ ದಿನಗಳ ಹಿಂದೆ ನದಿ ನೀರಿಗೆ ಇಳಿದ ವ್ಯಕ್ತಿಯೋರ್ವ ಮುಳುಗಿ ಮೃತಪಟ್ಟ ಘಟನೆಯೂ ನಡೆದಿತ್ತು. ಹೀಗಾಗಿ ನಗರದ ನೀರಿನ ದಾಹ ನೀಗಿಸುವ ಮರಳು ಕಟ್ಟದಲ್ಲಿ ಶುಚಿತ್ವ ಕಾಪಾಡಲು ಸ್ವತಃ ಜನರೇ ಎಚ್ಚರ ವಹಿಸಬೇಕಿದೆ.

ಫಲಕದಲ್ಲಿ ಏನಿದೆ?
ಮರಳು ಕಟ್ಟದ ಮೇಲ್ಭಾಗದ 50 ಮೀ. ಅಂತರದಲ್ಲಿ ಸಾರ್ವಜನಿಕರು ಸ್ನಾನ ಮಾಡುವುದಾಗಲಿ, ಈಜುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಮೀನು ಬೇಟೆ ಅಥವಾ ಇತ್ಯಾದಿಗಳ ಮೂಲಕ ನೀರನ್ನು ಕಲ್ಮಶಗೊಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next