Advertisement

ಸಚಿವರ ಎದುರೆ ಆಯನೂರು,ಪಾಲಿಕೆ ಆಯುಕ್ತೆಯ ನಡುವೆ ವಾಕ್ಸಮರ

09:07 AM Jun 12, 2019 | Vishnu Das |

ಶಿವಮೊಗ್ಗ : ನಗರದಲ್ಲಿ ಮಂಗಳವಾರ ಸ್ಮಾರ್ಟ್‌ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಸಚಿವ ಡಿ.ಸಿ.ತಮ್ಮಣ್ಣ ಅವರ ಎದುರೆ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮತ್ತು ಪಾಲಿಕೆ ಆಯುಕ್ತೆ ಚಾರುಲತಾ ಅವರ ನಡುವೆ ವಾಕ್ಸಮರ ನಡೆದಿದೆ.

Advertisement

ಕಾಮಗಾರಿಗಳ ಬಗ್ಗೆ ಕೇಳಿದರೆ ಆಗುತ್ತದೆ ಎನ್ನುತ್ತೀರಿ, ಲೈಟ್‌ ಇಲ್ಲದೆ ಜನರು ಕತ್ತಲಲ್ಲಿ ಸಾಯುತ್ತಿದ್ದಾರೆ. ಒಂದು ದಿನ ಅಲ್ಲಿಗೆ ಹೋಗಿ ನೋಡಿ ಎಂದು ಆಯುಕ್ತೆ ವಿರುದ್ಧ ಆಯನೂರು ಮಂಜುನಾಥ್‌ ಆಕ್ರೋಶ ಹೊರ ಹಾಕಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಚಾರುಲತಾ, ನೀವು ಏಕವಚನದಲ್ಲಿ ಮಾತನಾಡಬೇಡಿ.ಸರಿಯಾಗಿ ಮಾತನಾಡಿ,ನಾನು ನಿಮಗೆ ಗೌರವ ನೀಡುತ್ತೇನೆ ಎಂದಿದ್ದಾರೆ.

ಇದಕ್ಕೆ ಉತ್ತರವಾಗಿ ಏನಮ್ಮ ನಿನಗೆ ಗೌರವ ಬೇಕು, ಅಲ್ಲಿ ಜನ ಸಾಯುತ್ತಿದ್ದಾರೆ, ನಿನಗೆ ಹೇಗೆ ಹೇಳಬೇಕಮ್ಮ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಮತ್ತೆ ಉತ್ತರಿಸಿದ ಚಾರುಲತಾ, ನಾನು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಕಿಡಿ ಯಾಗಿದ್ದಾರೆ.

Advertisement

ಇಬ್ಬರ ವಾಕ್ಸಮರ ತೀವ್ರಗೊಳ್ಳುತ್ತಿದ್ದಂತೆ ಸಚಿವ ತಮ್ಮಣ್ಣ ಅವರು ಆಯನೂರು ಅವರನ್ನು ಸಮಾಧಾನ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next