Advertisement

Muslim; ಮುಸ್ಲಿಮರ ಹಿತಕ್ಕೆ ವಕ್ಫ್ ತಿದ್ದುಪಡಿ ಕಾಯ್ದೆ: ಅನ್ವರ್‌ ಮಾಣಿಪ್ಪಾಡಿ

01:31 AM Oct 14, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಜಂಟಿ ಸಂಸದೀಯ ಸಮಿತಿ ಎದುರು ಕರ್ನಾಟಕ ಅಲ್ಪಸಂಖ್ಯಾಕ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಸೋಮವಾರ ತಮ್ಮ ವಾದ ಮಂಡಿಸಲಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು “ಬೆಳಗ್ಗೆ 11 ಗಂಟೆಗೆ ಸಮಯ ನೀಡಲಾಗಿದೆ’ ಎಂದಿದ್ದಾರೆ. ಮುಸ್ಲಿಂ ಸಮುದಾಯದ ಹಿತಕ್ಕಾಗಿಯೇ ಈಗಿನ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಹೀಗಾಗಿ, ಸಮುದಾಯ ತಿದ್ದುಪಡಿ ಒಪ್ಪಬೇಕು ಎನ್ನುವುದು ನನ್ನ ವಾದ. ಅದನ್ನೇ ಸಮಿತಿ ಮುಂದೆ ಮಂಡಿಸಲಿದ್ದೇನೆ. ಜತೆಗೆ ನಾನು ಅಲ್ಪಸಂಖ್ಯಾಕರ ಅಯೋಗದ ಅಧ್ಯಕ್ಷನಾಗಿದ್ದಾಗ ವರದಿ ಕೊಟ್ಟು ಈಗ 12 ವರ್ಷ ಆಗಿದೆ. ನನ್ನ ವರದಿಯಲ್ಲಿ ಹೇಳಿರುವ ವಿಚಾರಗಳನ್ನು ಸಮಿತಿ ಮುಂದೆ ವಿವರಿಸುತ್ತೇನೆ’ ಎಂದರು.

2 ದಿನ ಅಹವಾಲು ಆಲಿಕೆ

ಬಿಜೆಪಿ ಸಂಸದ ಜಗದಾಂಬಿಕಾ ಪಾಲ್‌ ನೇತೃತ್ವದ ಸಮಿತಿ­ಯು ಸೋಮವಾರ ಮತ್ತು ಮಂಗಳವಾರ 2 ದಿನಗಳ ಕಾಲ ವಿವಿಧ ಸಂಘಟನೆಗಳು, ವಕೀಲರಿಂದ ಕಾಯ್ದೆಗೆ ಸಂಬಂಧಿಸಿದಂತೆ ಅಭಿಪ್ರಾಯ ಆಲಿಸಲಿದೆ. ನಾಸಿಕ್‌ನ ಕಾಲಾರಾಮ್‌ ದೇವಾಲಯದ ಅರ್ಚಕ ಮಹಾಂತ ಸುಧೀರ್‌ದಾಸ್‌ ಮಹಾರಾಜ್‌ ಸೇರಿ ಪ್ರಮುಖರು ಅಭಿಪ್ರಾಯ ಸಲ್ಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next