Advertisement

ಪುತ್ತೂರು: ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆ ಸಾವು

05:03 PM Jul 07, 2020 | keerthan |

ಪುತ್ತೂರು: ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪುತ್ತೂರಿನ ಪರ್ಲಡ್ಕ ಸಮೀಪ ಗೋಳಿತೊಟ್ಟು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಕೆಎಸ್ಆರ್‌ಟಿಸಿ ಬಸ್ಸು ಚಾಲಕ ಚಂದ್ರ ಶೇಖರ್ ರವರ ಪತ್ನಿ ವಸಂತಿ (49) ಮೃತಪಟ್ಟ ಮಹಿಳೆ.

ಇವರು ಮನೆಯ ಹಿಬಂದಿಯ ಜಗಲಿಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಮೇಲ್ಭಾಗದಲ್ಲಿನ ಮನೆಯ ಅವರಣ ಗೋಡೆ ಇವರ ಮೇಲೆ ಬಿದ್ದ ಕಾರಣ ದುರ್ಘಟನೆ ನಡೆದಿದೆ.

ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕೌಂಪಾಡ್ ಗೋಡೆ ಕುಸಿತವಾಗಿದೆ ಎನ್ನಲಾಗಿದೆ.

Advertisement

ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ಅಗ್ನಿ ಶಾಮಕ ದಳದಿಂದ ಕಾರ್ಯಚರಣೆ ನಡೆಯುತ್ತಿದೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next