Advertisement

Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌

12:55 PM Sep 27, 2024 | Team Udayavani |

“ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಪಾರ್ಟ್‌-2, ಟು ಬಿ ಕಂಟಿನ್ಯೂಡ್‌..- ಇತ್ತೀಚೆಗೆ ಒಂದಷ್ಟು ಸಿನಿಮಾಗಳ ಕೊನೆಯಲ್ಲಿ ಈ ತರಹದ ವಾಕ್ಯಗಳನ್ನು ನೋಡಿರುತ್ತೀರಿ. ಸಿನಿಮಾ ಮುಂದುವರೆಯಲಿದೆ, ಮುಂದುವರೆದ ಭಾಗ ಬರಲಿದೆ, ಪಾರ್ಟ್‌-2 ಸದ್ದು ಮಾಡಲಿದೆ ಎಂಬ ಸಂದೇಶದೊಂದಿಗೆ ಬಹುತೇಕ ಸಿನಿಮಾಗಳು ಕೊನೆಗೊಳ್ಳುತ್ತವೆ. ಹೀಗೆ ಕೊನೆಗೊಂಡ ಸಿನಿಮಾಗಳು ನಿಜಕ್ಕೂ ಸೆಟ್ಟೇರುತ್ತವಾ ಅಥವಾ ಸೆಟ್ಟೇರಿದ ಸಿನಿಮಾಗಳು ಹಿಟ್‌ ಆಗುತ್ತಾ ಎಂದು ಕೇಳಿದರೆ ಉತ್ತರ ಕಷ್ಟ.

Advertisement

ಉಪೇಂದ್ರ ನಟನೆಯ “ಕಬ್ಜ’ ಚಿತ್ರದ ಕೊನೆ ಯಲ್ಲೂ “ಕಬ್ಬ-2′ ಎಂದು ಹಾಕಲಾಗಿತ್ತು. ಶಿವರಾಜ್‌ಕುಮಾರ್‌ ಅವರ “ಘೋಸ್ಟ್‌’ ಸಿನಿಮಾ ಕೂಡಾ “ಘೋಸ್ಟ್‌-2′ ಬರುವುದಾಗಿ ಹೇಳಿತ್ತು. “ಸಲಾರ್‌’ ಕೂಡಾ “ಸಲಾರ್‌-2′ ಘೋಷಣೆ ಮಾಡಿತ್ತು. ಇತ್ತೀಚೆಗೆ ತೆರೆಕಂಡ “ಭೀಮ’ ಕೂಡಾ ಮತ್ತೂಂದು ಸಿನಿಮಾಕ್ಕೆ ಲೀಡ್‌ ಕೊಟ್ಟಿತ್ತು. ಅಷ್ಟೇ ಅಲ್ಲ, ಇತ್ತೀಚೆಗೆ ತೆರೆಕಂಡ “ಪೆಪೆ’, “ಪೌಡರ್‌’ ಚಿತ್ರಗಳು ಕೂಡಾ ಮುಂದುವರೆದ ಭಾಗದ ಸೂಚನೆಯೊಂದಿಗೆ ಕೊನೆಗೊಂಡಿದ್ದವು. ಹಾಗಾದರೆ ನಿಜಕ್ಕೂ ಈ ಚಿತ್ರಗಳು ಮುಂದುವರೆಯುತ್ತಾ ಎಂದು ಕೇಳಿದರೆ, ಆ ಚಿತ್ರಗಳ ಮೊದಲ ಭಾಗದ ಗೆಲುವಿನ ಮೇಲೆ ಅವಲಂಬಿತವಾಗಿರುತ್ತವೆ. ಮೊದಲ ಭಾಗವೇನಾದರೂ ದೊಡ್ಡ ಮಟ್ಟದಲ್ಲಿ ಗೆದ್ದು, ಬಿಝಿನೆಸ್‌ನಲ್ಲೂ ಸದ್ದು ಮಾಡಿದರೆ ಚಿತ್ರತಂಡ ಪಾರ್ಟ್‌-2 ಮಾಡುವ ಯೋಚನೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಕಥೆಗೆ ಹೊಸ ರೂಪ ಕೊಡಬೇಕಾಗುತ್ತದೆ. ಇದರ ಜೊತೆಗೆ ಮೊದಲ ಭಾಗ¨ನಾಯಕ ನಟನ ಕಮಿಟ್‌ ಮೆಂಟ್‌ ಹಾಗೂ ಆ ತಂಡದ ಜೊತೆಗಿನ ಸಂಬಂಧ ಕೂಡಾಮುಖ್ಯವಾಗುತ್ತದೆ. ಅದೆಷ್ಟೋ ನಾಯಕ ನಟರು ಸಿನಿಮಾ ಮುಗಿಯುವ ಹೊತ್ತಿಗೆ ತಂಡದದಿಂದ ದೊಡ್ಡ ಅಂತರ ಕಾಯ್ದು ಕೊಂಡಿರುತ್ತಾರೆ. ಹೀಗಿರುವಾಗ ಮತ್ತೆ ಅವರೊಂದಿಗೆ ಸಿನಿಮಾ ಮಾಡಬೇಕಾದರೆ ಹೊಸ “ಬೆಸುಗೆ’ಯೇ ಬೇಕಾಗುತ್ತದೆ.

ಘೋಷಿಸಿದ ಸಿನಿಮಾಗಳ ಕಥೆಯೇನು?

ಈಗಾಗಲೇ ಉಪೇಂದ್ರ ಅವರ “ಕಬ್ಜ’, ಶಿವರಾಜ್‌ಕುಮಾರ್‌ ಅವರ “ಘೋಸ್ಟ್‌’ ಹಾಗೂ ಪ್ರಭಾಸ್‌ ನಟನೆಯ “ಸಲಾರ್‌’ ಚಿತ್ರಗಳು ಮುಂದುವರೆದ ಭಾಗ ಘೋಷಿಸಿವೆ. ಆದರೆ, ಸದ್ಯ ಈ ಚಿತ್ರಗಳು ಸೆಟ್ಟೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಸದ್ಯ ಈ ಚಿತ್ರಗಳ ನಾಯಕ ನಟರು, ನಿರ್ದೇಶಕರು ಬೇರೆ ಬೇರೆ ಸಿನಿಮಾಗಳಲ್ಲಿ ಬಿಝಿ ಇದ್ದಾರೆ. ಎಲ್ಲವೂ “ಹೊಂದಿಕೆ’ಯಾದರೆ ಚಿತ್ರ ಸೆಟ್ಟೇರಬಹುದು. ಎಷ್ಟೋ ಸಿನಿಮಾಗಳು ಮುಂದುವರೆದ ಭಾಗ ಬರುತ್ತದ ಎಂಬ ಕಾರಣಕ್ಕೆ ಮೊದಲ ಭಾಗದ ಕ್ಲೈಮ್ಯಾಕ್ಸ್‌ ಅನ್ನು ಅಪೂರ್ಣವಾಗಿಸಿ, ನೋಡುಗರ ಕುತೂಹಲ ಹೆಚ್ಚಿಸಿವೆ.

ಪಾರ್ಟ್‌-2ಗೆ ಕೆಜಿಎಫ್ ನಾಂದಿ

Advertisement

ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಕ್ರೇಜ್‌ ಜೊತೆಗೆ ಪಾರ್ಟ್‌-2 ಕ್ರೇಜ್‌ ಹುಟ್ಟಿಸಿದ್ದು ಯಶ್‌ ನಟನೆಯ “ಕೆಜಿಎಫ್’. ಮೊದಲ ಭಾಗ ದೊಡ್ಡ ಹಿಟ್‌ ಆಗುವ ಮೂಲಕ ಚಿತ್ರತಂಡ ಎರಡನೇ ಭಾಗ ಮಾಡುವ ಮನಸು ಮಾಡಿತು. ಆ ಚಿತ್ರ ಕೂಡಾ ಭರ್ಜರಿ ಯಶಸ್ಸು ಕಂಡಿತು. ಇದರೊಂದಿಗೆ ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌ ಜೋರಾಯಿತು ಎಂದರೆ ತಪ್ಪಲ್ಲ. ಆ ನಂತರ ಕೆಲವು ಸಿನಿಮಾಗಳು ಪಾರ್ಟ್‌-2 ಆಗಿ ಬಂದರೂ “ಕೆಜಿಎಫ್’ ಮಟ್ಟದ ಯಶಸ್ಸು ಸಿಗಲಿಲ್ಲ.

ಕಾಂತಾರದ ಗೆಲುವಲ್ಲಿ ಪ್ರೀಕ್ವೆಲ್‌

ಸದ್ಯ ಸಿನಿಮಾಗಳ ಮುಂದುವರೆದ ಭಾಗಗಳ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವುದು ರಿಷಬ್‌ ನಿರ್ದೇಶನದ “ಕಾಂತಾರ-1′. ಚಿತ್ರತಂಡ ಹೇಳಿಕೊಂಡಂತೆ ಇದು ಸೀಕ್ವೆಲ್‌ ಅಲ್ಲ, ಪ್ರೀಕ್ವೆಲ್‌, ಕಾರಣ “ಕಾಂತಾರ’ದ ದೊಡ್ಡ ಯಶಸ್ಸು. ಕನ್ನಡದ ಈ ಚಿತ್ರ ಪ್ಯಾನ್‌ ಇಂಡಿಯಾ, ಪ್ಯಾನ್‌ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡಿ, ಚಿತ್ರತಂಡವೇ ದಂಗಾಗುವಂತಹ ಬಿಝಿನೆಸ್‌ ಮಾಡಿತು. ಅಲ್ಲಿಂದ ರಿಷಬ್‌ ಶೆಟ್ಟಿ ಎಂಬ ಕೆರಾಡಿಯ ಪ್ರತಿಭೆ ಪ್ಯಾನ್‌ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಮೂಲಕ “ಕಾಂತಾರ’ ದ ಮತ್ತೂಂದು ಭಾಗ ಮಾಡುವ ಕನಸು ಹುಟ್ಟಿತು. ಅಲ್ಲಿಂದ ಕಥೆ ಆರಂಭವಾಗಿ ಈಗ ಭರ್ಜರಿ ಶೂಟಿಂಗ್‌ ಕೂಡಾ ನಡೆಯುತ್ತಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next