Advertisement

ವಿವಿಐಪಿ ಹೆಲಿಕಾಪ್ಟರ್‌ ಹಗರಣ : ತ್ಯಾಗಿಗೆ ವಿದೇಶಕ್ಕೆ ಹೋಗಲು ಅನುಮತಿ

03:09 PM Dec 24, 2018 | udayavani editorial |

ಹೊಸದಿಲ್ಲಿ : ಸಿಬಿಐ ದಾಖಲಿಸಿರುವ ವಿವಿಐಪಿ ಹೆಲಿಕಾಪ್ಟರ್‌ ಹಗರಣ ಕೇಸಿನ ಓರ್ವ ಆರೋಪಿಯಾಗಿರುವ ಮಾಜಿ ಐಎಎಫ್ ಮುಖ್ಯಸ್ಥ ಎಸ್‌ ಪಿ ತ್ಯಾಗಿ ಅವರಿಗೆ ಮುಂದಿನ ವರ್ಷ ಮಾರ್ಚ್‌ ನಲ್ಲಿ ವಿದೇಶಕ್ಕೆ ಹೋಗುವುದಕ್ಕೆ ದಿಲ್ಲಿ ಕೋರ್ಟ್‌ ಇಂದು ಸೋಮವಾರ ಅನುಮತಿ ನೀಡಿದೆ.

Advertisement

ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್‌ ಅವರು ತ್ಯಾಗಿ ಮತ್ತು ಅವರ ಸೋದರ ಸಂಬಂಧಿ ಸಂಜೀವ ತ್ಯಾಗಿ ಅವರು ಮುಂದಿನ ವರ್ಷ ಮಾರ್ಚ್‌ ನಲ್ಲಿ ತಮಗೆ ಅಮೆರಿಕಕ್ಕೆ ಹೋಗುವುದಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಅನುಮತಿ ಮಂಜೂರು ಮಾಡಿದರು. 

ಇದೇ ರೀತಿ ಅರ್ಜಿದಾರರು ಜಾರಿ ನಿರ್ದೇಶನಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲಿನ ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಲಾಗಿದೆ. ಒಂದೊಮ್ಮೆ ಜಾರಿ ನಿರ್ದೇಶನಾಲಯ ಅರ್ಜಿದಾರರ ಕೋರಿಕೆಯನ್ನು ವಿರೋಧಿಸಿದರೆ, ನ್ಯಾಯಾಲಯ ಕೂಡ ಅವರಿಗೆ ಅನುಮತಿ ನಿರಾಕರಿಸಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next